ಪುನರಾವರ್ತನೆ
ಹಠ ಛಲದಿಂದ ಬದುಕನ್ನೇ ಬರಡಾಗಿಸಿಕೊಂಡಳು ಅಂಬೆ! ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ ಸಾಲ್ವ ಸುಖವಾಗಿ ಬಾಳಿದ!! ಕ್ಷಣ ಕಾಲದ ಚಿತ್ತ ಇನಿಯನತ್ತ ಇತ್ತ ಶಕುಂತಲೆ ಪರಿತಪಿಸಿದಳು ನೊಂದು! ಮುದ್ರೆ ಉಂಗುರ ದೊರಕುವವರೆಗೂ, ಮನಕ್ಲೇಶವಿಲ್ಲದೆ ಮುದದಿಂದಿದ್ದ ದುಷ್ಯಂತ!! ಜಮದಗ್ನಿಯ ಕೋಪ ತಾಪಕೆ ಮಗನಿಂದಲೇ ಹತಳಾದ ರೇಣುಕೆ! ಬದುಕಿ ಬಂದರೂ ದಿಗ್ ಭ್ರಮೆ!! ಸಂಬಂಧಗಳ ಸಂಕೀರ್ಣತೆ ಹೃದಯ ಕಲಕಿತೆ??? ಪಂಚಪಾಂಡವರ ಹೇಡಿತನಕ್ಕೆ ಹೊಣೆಯಾಗಿ ನಿಂತಳು ಪಾಂಚಾಲಿ! ಮರಳಿದ ಸೀತೆಗೆ ಅಗ್ನಿಪರೀಕ್ಷೆಯ ಅನಿವಾರ್ಯತೆ!! ವಿವೇಕ -ವಿವೇಚನೆ ಮರೆತು ವಿನಾಶವನ್ನೇ ಆಹ್ವಾನಿಸಿದ ದುರುಳರು! ಧರ್ಮ ನಿಷ್ಠೆ ಸತ್ಯದ ಪಥದಲ್ಲಿ ಮತ್