top of page

ನಾನೇನೂ ಹೇಳುವದಿಲ್ಲ

ನಾನೇನೂ ಹೇಳುವದಿಲ್ಲ ನಿಮಗೆಲ್ಲವೂ ಗೊತ್ತು ಗೊತ್ತಿದ್ದರೂ ನೀವು ಮಾತನಾಡುವದಿಲ್ಲ ನೀವು ಮಾತನಾಡದಿದ್ದರೂ  ನನಗೆ ಗೊತ್ತು ನಿಮಗೆಲ್ಲವೂ ಗೊತ್ತಿದೆಯೆಂದು ಅದಕ್ಕೇ ನಾನೇನೂ ಹೇಳುವದಿಲ್ಲ. * ಎಲ್ಲವೂ ಎಲ್ಲರಿಗೂ  ಗೊತ್ತಿರಲೇಬೇಕೆಂದೇನಿಲ್ಲ, ಗೊತ್ತಿದ್ದರೂ ಹೇಳಲೇಬೇಕೆಂದೇನಿಲ್ಲ ಹೇಳಿದರೂ ಅದು ಎಲ್ಲರಿಗೂ  ತಿಳಿಯಲೇಬೇಕೆಂದೇನಿಲ್ಲ ತಿಳಿದವರು  ತಿಳಿದಿದೆ ಎಂದು ಹೇಳುವದಿಲ್ಲ;  ತಿಳಿಯದವರು ಹೇಳಿದರೆ  ಅದು ನಮಗೆ ತಿಳಿಯುವದೂ ಇಲ್ಲ ಅದಕ್ಕೇ ನಾನೇನೂ ಹೇಳುವದಿಲ್ಲ ಏಕೆಂದರೆ  ಹಿಂದೆ ಹೇಳಿದ್ದೇ  ಇನ್ನೂ ಜೀರ್ಣವಾಗಿಲ್ಲ * ಇಲ್ಲಿ ಅಕ್ರಮಗಳು  ಸಕ್ರಮವಾಗುತ್ತವೆ, ಇಲ್ಲಿ ಅಯೋಗ್ಯರು  ಯೋಗ್ಯರೆನಿಸುತ್ತಾರೆ ಇಲ್ಲಿ ಭ್ರಷ್ಟತೆ ವರವಾಗುತ್ತದೆ,  ಇಲ್ಲಿ ಪ್ರಾಮಾಣಿಕತೆ  ಶಾಪವಾಗುತ್ತದೆ,  ಇಲ್ಲಿ  ಸುಳ್ಳು ಹೇಳಿದವರು ಅರಮನೆಯೊಳಗಿರುತ್ತಾರೆ ಸತ್ಯ ಹೇಳಿದವರು ಸೆರೆಮನೆಯೊಳಗಿರುತ್ತಾರೆ ಇಲ್ಲಿ  ಸತ್ಯ ನ್ಯಾಯ ಕಾನೂನುಗಳ  ಮಾರಾಟ ಮಾಡುವವರೂ‌ ಇದ್ದಾರೆ ಕೊಳ್ಳುವವರೂ ಇದ್ದಾರೆ; ಇಲ್ಲಿ ಭಗವದ್ಗೀತೆ, ಕುರಾನು,  ಬೈಬಲ್ಲುಗಳ ಮುಟ್ಟಿಯೇ  ಸುಳ್ಳು ಹೇಳುವವರಿದ್ದಾರೆ,  ಮತ್ತೆ  ನಾನು ಹೇಳುವದೆಲ್ಲ ಸತ್ಯ ಎನ್ನುತ್ತಾರೆ, ಸತ್ಯ ಸುಳ್ಳಾಗುವದಕ್ಕೆ ಸುಳ್ಳು ಸತ್ಯವಾಗುವದಕ್ಕೆ ಹೆಚ್ಚು ಹೊತ್ತು ಬೇಕಿಲ್ಲ, ಸ್ವಲ್ಪ ಹಣ ಬೇಕು, ಅಷ್ಟೇ * ಗಾಂಧೀಜಿ ಹೇಳಿದ್ದಾರೆ- " ಕಿವಿ, ಕಣ್ಣು , ಬಾಯಿ  ಎಲ್ಲ‌ಮುಚ್ಚಿಕೊಳ್ಳಿ" ಅದಕ್ಕೇ ನಾವು ಪ್ರತಿಜ್ಞೆ ಮಾಡಿದ್ದೇವೆ " ಒಳ್ಳೆಯದನ್ನು ನೋಡುವದಿಲ್ಲ ಒಳ್ಳೆಯದನ್ನು ಮಾಡುವದಿಲ್ಲ ಒಳ್ಳೆಯದನ್ನು ಕೇಳುವದಿಲ್ಲ" ಆದ್ದರಿಂದ ನನ್ನನ್ನೇನೂ ಕೇಳಬೇಡಿ ನಾನೇನೂ ಹೇಳುವದಿಲ್ಲ;  ಹೇಳಿದರೆ ನೀವೂ  ಕೇಳುವದಿಲ್ಲ.  -  ಎಲ್. ಎಸ್. ಶಾಸ್ತ್ರಿ ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ( ಎಲ್. ಎಸ್. ಶಾಸ್ತ್ರಿ) ಬರವಣಿಗೆಯ ಕಾಯಕದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೆತ್ತುಕೊಂಡಿರುವ ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.ಪತ್ರಿಕೋದ್ಯಮದಲ್ಲಿ ೫೬ ವರ್ಷಗಳ ಅಖಂಡ ಸೇವೆ. ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ , ಲೋಕದರ್ಶನ, ಶೃಂಗಾರ, ನವಕಲ್ಯಾಣ, ದೀನವಾಣಿ, ಜನತಾ, ನವನಾಡು, ಕರ್ನಾಟಕ ಮಲ್ಲ ಮೊದಲಾದ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕಾರ್ಯ ನಿರ್ವಹಣೆ. ಹತ್ತು ಸಾವಿರ ಸಂಪಾದಕೀಯಗಳು, ಎರಡು ಸಾವಿರ ಮುನ್ನುಡಿಗಳು. ಹೀಗೆ ಪಾದರಸದಂತೆ ಚಲನಶೀಲರಾಗಿರುವ ಎಲ್ಎಸ್ಎಸ್ ಅವರಿಗೆ ೭೬ ಅಂದರೆ ನಂಬುವುದು ಕಷ್ಟ.ಅವರು ನಿತ್ಯ ಯುವಕರು. - ಸಂಪಾದಕ.

ನಾನೇನೂ ಹೇಳುವದಿಲ್ಲ

©Alochane.com 

bottom of page