![](https://static.wixstatic.com/media/20adf4_6e4766e959554531ad7c18a5167ee3b5.png/v1/fill/w_96,h_96,al_c,q_85,usm_0.66_1.00_0.01,blur_2,enc_auto/20adf4_6e4766e959554531ad7c18a5167ee3b5.png)
ಏನು ಹೇಳಬೇಕೆಂದು ತಿಳಿಯುತ್ತಿಲ್ಲ ನನಗೆ.....
ಅಂದು ಕೊಂಡಿದ್ದೆ ನೀನು ಸಿಗುವ ಹೊತ್ತು ಇನ್ನೇನು ರಾತ್ರಿ ಕಳೆದು ಬೆಳಗಾಗುವುದರೊಳಗೆ ಬಂದು ಬಿಡಬಹುದು ಎಂದು ಸೀತೆಗೆ ಅಗ್ನಿ ಪರೀಕ್ಷೆ ಬರೆಯುವ ಪ್ರಮೇಯವೇ ಇಲ್ಲವೆಂದು ಕಳೆದ ಎರಡು ವಸಂತಗಳಿಂದ ನನ್ನ ನೋಡುತ್ತ ಖೋ ಕೊಡುತ್ತ ಎಬ್ಬಿಸಿ ಓಡಿಸಿ ಕುಳ್ಳಿಸಿಬಿಡುವ ಒಳ್ಳೆ ಆಟಗಾರ ಜೊತೆಗಿರುವ ಹಠದ ಬಾಕಿ ತೀರಿಸಿ ಹಬ್ಬದ ಮುಂಗಡವೆಂದೆ ಸಿಗುವ ಮಾತಾಡಿದ್ದೆ ಮಹಾನಗರದ ಮನಸುಗಳೇ ಹಾಗಿರಬೇಕು ಬೇಕಾದಾಗ ಬಂದು ತಾವೆ ಹುಡುಕಿದ ಕಳ್ಳ ಕಿಂಡಿಯ ಖಾಲಿ ಖೋಲಿ ನೋಡಿ ಪ್ಲ್ಯೆ ಓವರ್ ಕನಸು ಕಟ್ಟಿ ನಗು ನಗುತ್ತ ವಾಸ್ತುವಿನ ನೆಪವೊಡ್ಡಿ ಬೆನ್ನು ಹಾಕಿ ಒಂಟಿಮನೆಯಾಗಿಸಿದವರು. ಮಾಯಾವಿ ಮನಸು ಬೇಗ ನಂಬಿಬಿಡುತ್ತದೆ ಮುಂದೆ ಭೇಟಿಯಾಗುವೆ ಎಂಬುದನ್ನೂ ಕೂಡ ಓಡುವ ಕಾಲದಲ್ಲಿ ಬದಲಾದ ವಯಸ್ಸು ನಿನಗಿಂತ ಹತ್ತು ವರ್ಷ ಮುಂದೆ ಹೋಗಿ ಸೀಟಿ ಊದಿ ನಿಲ್ಲಿಸುವುದು ವಿಳಾಸವಿಲ್ಲದ ನಿಲುಗಡೆಯಲ್ಲಿ ಆಗ ಭೇಟಿಯಾದರೂ ಕೂಡ ಹೆಸರಿಗಷ್ಟೇ ಆರಾಮವಾಗಿ ಇರು ಎಂದೇ ಕಾಡಲ್ಲಿ ಬಿಟ್ಟು ಎದ್ದೊಡುವ ರೂಢಿ ಈಗ ಮೌನದ ಮನೆಯೊಳಗೆ ಏನೇ ಸದ್ದಾದರೂ ನೀನೆ ಬಂದಂತೆ ನಕ್ಕಂತೆ ಮಾತಾಡಿದಂತೆ ಎಲ್ಲಾ ಸತ್ಯ ಅಂದುಕೊಂಡರೂ ಎಲೆಗಳ ಸದ್ದು ಬಿದ್ದು ಹೋಗುವ ಮಾತುಗಳನ್ನೆ ಆಡುತ್ತಿವೆ ಅಕ್ಷತಾ ಕೃಷ್ಣಮೂರ್ತಿ
![ಏನು ಹೇಳಬೇಕೆಂದು ತಿಳಿಯುತ್ತಿಲ್ಲ ನನಗೆ.....](https://static.wixstatic.com/media/a27d24_f126618d3afe4acca4bd8937a2637f6a~mv2.jpg/v1/fill/w_503,h_285,al_c,lg_1,q_80,enc_auto/Image-empty-state.jpg)