top of page
![](https://static.wixstatic.com/media/20adf4_6e4766e959554531ad7c18a5167ee3b5.png/v1/fill/w_96,h_96,al_c,q_85,usm_0.66_1.00_0.01,blur_2,enc_auto/20adf4_6e4766e959554531ad7c18a5167ee3b5.png)
ಅರುಣೋದಯ
(ಶರ ಷಟ್ಪದಿ) ನೋಡದೊ ಕಂದನೆ ಮೂಡಣದಂಚಲಿ ಮಾಡಿಹ ದಿನಕರನಚ್ಚರಿಯ ಕಾಡದೆ ನಮ್ಮನು ಮಾಡದೆ ತಡವನು ಮೂಡುತ ಬೆಳಗುತಲೀಧರೆಯ// ಸುತ್ತಣ ಲೋಕದ ಕತ್ತಲೆಯೋಡಿಸಿ ಮುತ್ತಿನಲೆರಕವ ಹೊಯ್ದಿಹನು ನೆತ್ತಿಗೆ ತಿಲಕವ ನಿತ್ತಿಹ ಭೂರಮೆ ಚಿತ್ತದಿ ಪುಳಕಿತ ಮಾಡಿಹನು// ರಂಗಿನಗಿರಣದೆ ಸಿಂಗರವೀನೆಲ ಕೆಂಗದಿರನೊಲವನೂ ತೊಡಿಸಿ ಚಂಗನೆ ಚೆಲ್ಲಿದ ರಂಗಲೆ ನಾಚಿದೆ ಕಂಗೊಳಿತ ಸೊಬಗು ಸಂಭ್ರಮಿಸಿ// ಅರುಣನುದಯವದು ಚುರುಕುಗೊಳಿಸುತಿದೆ ತರುಲತೆ ಮಿಗಖಗ ವೆಚ್ಚರಿಸಿ ಬೆರಗನೆ ತಂದಿದೆ ತೊರೆನದಿ ಕಡಲಲಿ ಸಿರಿಗಿರಣವಿಳಿದು ಮಿಂಚಿರಿಸಿ// ತೆಂಗದು ತೂಗಿದೆ ಕಂಗದು ಬಳುಕಿದೆ ಭೃಂಗವು ಪಾಡಿದೆ ಸವಿಗಾನ ರಿಂಗಣ ಕೋಗಿಲೆ ಸಂಗಡ ಮಾಡಿದೆ ತಂಗೊಳ ಮಿಂದಿದೆ ಕಾಜಾಣ// ಸುಂದರ ನೋಟವ ಕಂದನೆ ನೋಡುತ ಲಿಂದಿಗೆ ನೇಮವ ತಿಳಿಯಯ್ಯ ಚಂದದ ಭಾನುವಿ ನಂದದ ಕಾರ್ಯವ ನೊಂದನು ಅರಿಯುತ ಬಾಳಯ್ಯ// ಭವಾನಿ ಗೌಡ (ಭುವಿ) ವಿಜಯಪುರ
![ಅರುಣೋದಯ](https://static.wixstatic.com/media/84d600_4130581a8008471f81078c3a04228035~mv2.jpg/v1/fill/w_680,h_385,al_c,q_80,usm_0.66_1.00_0.01,enc_auto/Image-empty-state.jpg)
bottom of page