top of page

ಹೊಸತನ

ಉದಯ ಸೂರ್ಯ ಕಿರಣ ತಂತು

ಇಳೆಗೆ ಹೊಸತನ

ಜಡ ಕಳೆದು ಬುವಿಯ ಮಡಿಲು

ತಳೆಯಿತು ನವಚೈತನ್ಯ


ಹೂವು ಅರಳಿ ಗಂಧ ಹರಡಿ

ಎಲ್ಲೆಲ್ಲೂ ಘಮಘಮ

ಅವನಿಗೊಲವ ತೋರಲು

ದಿನಕರನ ಸರಿಗಮ


ರವಿಯ ಹೊಂಬಿಸಿಲು ಸೋಕಿ

ನಲಿವು ದಿನದಿನ

ಸುರಿವ ಕಿರಣ ಧಾರೆಯಲ್ಲಿ

ಮಿಂದು ಧರಣಿ ಪಾವನ


ಏನು ಮಾಯೆ ರವಿಯ ಲೀಲೆ

ವನ ವನವೂ ನಂದನ

ಯುಗ ಯುಗವು ಕಳೆದರೂ

ದಿನವು ನಿತ್ಯ ನೂತನ



ವೆಂಕಟೇಶ ಬೈಲೂರು

17 views0 comments
bottom of page