top of page

ಹು.ವೆಂ.ಚುಟುಕುಗಳು


ಹುಡುಕುತ್ತಲೇ ಇರೋಣ

*********************

ಬಂತು ಬಂತು ಬಂತು ೫ಜಿ

ಎಲ್ಲಿ ನಮ್ಮ ಗುರೂಜಿ?

ಕಳೆದುಹೋಗಿದ್ದಾನೆ ಅಬ್ಬರದಲ್ಲಿ

ಸಿಗಲಾರನು ಅವನಿನ್ನು ಸುಲಭದಲ್ಲಿ

*************ಹುವೆಂ**********


ಸ್ವಲ್ಪ ಯೋಚಿಸಿ

**************

ಬರಿ ಬೆನ್ನುಹತ್ತಿದರೆ ೫ ಜಿ

ಸಿಗುತ್ತದೇನು ಗಂಜಿ?

ಗಂಜಿಗೆ ರೈತನೇ ಬೇಕು

ಅವನಿಗಿಷ್ಟು ಮರ್ಯಾದೆ ಕೊಡಲೇಬೇಕು

*************ಹುವೆಂ********


ಸಾವಧಾನ

**********

ಶಾಸಕರಾಗಿ ಗೆದ್ದು ಬಂದ ಎಲ್ಲರಿಗೂ

ಸಿಗುವುದಿಲ್ಲ ಮಂತ್ರಿಸ್ಥಾನ

ಕನ್ನಡ ಸಾಹಿತಿಗಳೆಲ್ಲರಿಗೂ ಅಸಾಧ್ಯ

ರಾಜ್ಯೋತ್ಸವದ ಮಾನ-ಸನ್ಮಾನ

****************ಹುವೆಂ*******


ಎತ್ತು ಮರಿ ಕಸವ

****************

ಬೇಕು ಮರಿ ನಿನ್ನಂಥವರು

ಕಸವನೆತ್ತಿ ಹಾಕುವವರು

ನಿನಗಿಂತಲೂ ಉದ್ದ ಕಸಬರಿಗೆ

ಪಳಗಿಸದನು ನಿನ್ನ ನಿಲುವಿಗೆ

**************ಹುವೆಂ*********


ನಾವಿರುವುದೇ ನಿಮಗಾಗಿ

***********************

ನಿಮ್ಮ ಅಮೂಲ್ಯ ಮತ ಕೊಟ್ಟು ಆರಿಸಿ ತನ್ನಿರಿ

ಸೇವೆ ಮಾಡಲು ಟೊಂಕ ಕಟ್ಟುವೆವು

ಗದ್ದುಗೆ ಸಿಕ್ಕಿದ ಮೇಲೆ ಮುಗಿಯಿತು

ಐದು ವರ್ಷ ಆರಾಮವಾಗಿಯೇ ಇರುವೆವು

**************ಹುವೆಂ********


ಡೊಂಬರಾಟ

************

ವೋಟಿನ ಆಸರೆ ಪಡೆದುಕೊಂಡು

ಚುನಾವಣಾ ಬೇಲಿಯ ದಾಟುವರು

ಗತ್ತು ಗೊತ್ತಿಲ್ಲದ ಮಂದಿ

ಜೋಲಿ ಹೊಡೆದು ಲಾಗ ಹಾಕುವರು!

*************ಹುವೆಂ*********

(೧೯೮೨ ರಲ್ಲಿ ಪ್ರಕಟವಾದ "ನೆರಳು"ಎಂಬ ನನ್ನ ಚೌಪದಿ ಸಂಕಲನದೊಳಗಿನವು--ಚೌಪದಿಗಳು)

ಪ್ರೊ.ವೆಂಕಟೇಶ ಹುಣಶಿಕಟ್ಟಿ

48 views0 comments
bottom of page