top of page

ಶಾಂತಿಯ ಚೇತನ




ಶರಾವತಿ ಪಟಗಾರ ಅವರು ತಥಾಗತನಾದ ಬುದ್ದನನ್ನು ಕುರಿತು ಬರೆದ ಎದೆಯ ಕದವನ್ನು ತಟ್ಟುವ ಭಾವಪೂರ್ಣ ಕವನ. ಕೇಂದ್ರ ಕ.ಸಾ.ವೇ ಉ.ಕ.ದಿಂದ ಆಯ್ದುಕೊಂಡು ಪ್ರಕಟಿಸಲಾಗಿದೆ.ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ


#ಶಾಂತಿಯ ಚೇತನ#


*ಭೋಗ ತೊರೆದು ಬಾಳಿದಂತ|*

*ತ್ಯಾಗ ಮೂರ್ತಿ ಬುದ್ಧನೆ||*

*ರಾಗ ದ್ವೇಷ ತೋರದಂತ|*

*ಯೋಗಿ ಚಂದ್ರ ತೇಜನೆ||೧||*

*ಮೊಗದಿ ಮಂದಹಾಸ ತುಂಬಿ|*

*ನಗುವ ಅರ್ಥ ತೋರಿದೆ||*

*ಜಗಕೆ ಶಾಂತಿ ಮಂತ್ರ ಸಾರಿ|*

*ಸೊಗದ ಅರಿವು ನೀಡಿದೆ||೨||*

*ಹಿರಿದು ಬಂಡೆ ಮೇಲೆ ಕುಳಿತು|*

*ತೊರೆದೆ ಎಲ್ಲ ಚಿಂತೆಯ||*

*ತೆರೆದು ಮನದ ಕಣ್ಣನೊಮ್ಮೆ|*

*ಎರೆದೆ ಜ್ಞಾನ ಜ್ಯೋತಿಯ||೩||*

*ಮೌನಿಯಾಯ್ತು ಕಡಲ ತೆರೆಯು|*

*ಧ್ಯಾನಿ ನಿನ್ನ ಎದುರಿಗೆ||*

*ಬಾನಿನಲ್ಲಿ ಬೆಳಗೊ ಶಶಿಯು|*

*ತಾನು ಹೊಳೆದ ಚೆಲುವಿಗೆ||೪||*

*ಸೃಷ್ಟಿಯಂತೆ ನಿನ್ನ ಕಾಂತಿ|*

*ಹೃಷ್ಟ ತುಂಬಿ ಮೈಮನ||*

*ಎಷ್ಟು ಚೆಂದ ಶಾಂತಿ ಬಾಳು|*

*ಇಷ್ಟ ನಿನ್ನ ಜೀವನ||೫||*


✍️ ಶರಾವತಿ ಪಟಗಾರ ಭಟ್ಕಳ ಉ.ಕ.

42 views0 comments
bottom of page