ಶರಾವತಿ ಪಟಗಾರ ಅವರು ತಥಾಗತನಾದ ಬುದ್ದನನ್ನು ಕುರಿತು ಬರೆದ ಎದೆಯ ಕದವನ್ನು ತಟ್ಟುವ ಭಾವಪೂರ್ಣ ಕವನ. ಕೇಂದ್ರ ಕ.ಸಾ.ವೇ ಉ.ಕ.ದಿಂದ ಆಯ್ದುಕೊಂಡು ಪ್ರಕಟಿಸಲಾಗಿದೆ.ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
#ಶಾಂತಿಯ ಚೇತನ#
*ಭೋಗ ತೊರೆದು ಬಾಳಿದಂತ|*
*ತ್ಯಾಗ ಮೂರ್ತಿ ಬುದ್ಧನೆ||*
*ರಾಗ ದ್ವೇಷ ತೋರದಂತ|*
*ಯೋಗಿ ಚಂದ್ರ ತೇಜನೆ||೧||*
*ಮೊಗದಿ ಮಂದಹಾಸ ತುಂಬಿ|*
*ನಗುವ ಅರ್ಥ ತೋರಿದೆ||*
*ಜಗಕೆ ಶಾಂತಿ ಮಂತ್ರ ಸಾರಿ|*
*ಸೊಗದ ಅರಿವು ನೀಡಿದೆ||೨||*
*ಹಿರಿದು ಬಂಡೆ ಮೇಲೆ ಕುಳಿತು|*
*ತೊರೆದೆ ಎಲ್ಲ ಚಿಂತೆಯ||*
*ತೆರೆದು ಮನದ ಕಣ್ಣನೊಮ್ಮೆ|*
*ಎರೆದೆ ಜ್ಞಾನ ಜ್ಯೋತಿಯ||೩||*
*ಮೌನಿಯಾಯ್ತು ಕಡಲ ತೆರೆಯು|*
*ಧ್ಯಾನಿ ನಿನ್ನ ಎದುರಿಗೆ||*
*ಬಾನಿನಲ್ಲಿ ಬೆಳಗೊ ಶಶಿಯು|*
*ತಾನು ಹೊಳೆದ ಚೆಲುವಿಗೆ||೪||*
*ಸೃಷ್ಟಿಯಂತೆ ನಿನ್ನ ಕಾಂತಿ|*
*ಹೃಷ್ಟ ತುಂಬಿ ಮೈಮನ||*
*ಎಷ್ಟು ಚೆಂದ ಶಾಂತಿ ಬಾಳು|*
*ಇಷ್ಟ ನಿನ್ನ ಜೀವನ||೫||*
✍️ ಶರಾವತಿ ಪಟಗಾರ ಭಟ್ಕಳ ಉ.ಕ.