top of page

ಯುದ್ಧ

ಹರಿದ ದೇಹ

ಚೆಲ್ಲಿದ ರಕ್ತ

ಚೆಲ್ಲಾಪಿಲ್ಲಿಯಾದ ಅಂಗಾಂಗಗಳು

ಹೇಳಕೇಳುವವರಿಲ್ಲ

ಅತ್ತುಕರೆವವರಿಲ್ಲ

ಸ್ಮಶಾನ ಮೌನ

ಅವಶೇಷಗಳಡಿಗಳಲ್ಲಿ ಸಿಲುಕಿರಲು

ಹೊರಬರಲಾರದು ಆಕ್ರಂದನವೂ...!

ಯಾಕಾಗಿ ಈ ಯುದ್ಧ

ಯಾರಿಗಾಗಿ ಈ ಯುದ್ಧ...?

ಗೆದ್ದವ ಬೀಗಿದನೇ...?

ಸೋತವ ನರಳಿದನೇ...?

ಸಿಂಹಾಸನ ಭದ್ರವೇ...?

ಪಟ್ಟಭದ್ರರ ಪಟ್ಟಾಭಿಷೇಕ...!

ನರರು ನರಳಿ ನರಳಿ ನರಕವಾಸಿಗಳು

ನರೋತ್ತಮನಷ್ಟೇ ಅರಮನೆಯಲ್ಲಿ..!

ಅವ ಸಾಯಲು ಅಲ್ಲೇ

ಆ ಅರಮನೆಯಲ್ಲೇ ಹೂತು

ಗೋರಿ ಕಟ್ಟಬಹುದು...

ಮತ್ತದೂ ಸ್ಮಶಾನವೇ ಆಗುವುದು ತಾನೆ...!

ನೆತ್ತರಲ್ಲಿ ಕಟ್ಟಿದ ಸಾಮ್ರಾಜ್ಯ

ನೆತ್ತರನ್ನೇ ಬಯಸುತ್ತಿರುತ್ತದಷ್ಟೆ...!


— ಸೀತಾರಾಮ ನಾ ಹೆಗಡೆˌ ಕೈಗಡಿ

18 views0 comments
bottom of page