top of page

ತೊಟ್ಟು-೬೪

ಅದೇ ನೆಲ,

ಅದೇ ನೀರು,

ಅದೇ ಗಾಳಿ,

ಅದೇ ಸೂರ್ಯ;

ಮಾವು

ಸಿಹಿಯಾಗುತ್ತದೆ,

ಬೇವು

ಕಹಿಯಾಗುತ್ತದೆ,

ಹುಣಸೆ

ಹುಳಿಯಾಗುತ್ತದೆ!

ಅಚ್ಚರಿ ಸೃಷ್ಟಿಯ

ಮರ್ಮ,

ಅರಿತು ಬಿತ್ತಬೇಕು

ಸೂಕ್ತ ಬೀಜ,

ಅದೇ ನಮ್ಮ

ಧರ್ಮ.


ಡಾ. ಬಸವರಾಜ ಸಾದರ

1 view0 comments
bottom of page