top of page

ತೊಟ್ಟು-೨೦೨

ಘೋರತಪಸ್ಸು

-------------------

ಹತ್ತಾರು ವರ್ಷ

ಹಿಯಾಲಯದಲ್ಲಿ

ಘೋರ ತಪಗೈದ

ನಿಃಕಾಮಾನಂದರು

ಊರಿಗೆ ಬಂದರು;

ಬಗಲ ಕೂಸಿನ

ಯೋಗಿನಿಯೊಬ್ಬರು

ಅವರ ಜೊತೆ ಇದ್ದರು;

ಮುಗುಳು ನಕ್ಕ

ಸಂಸಾರಯೋಗಿಗಳು,

ನಮ್ಮೂರಲ್ಲೆ

ಇಂಥ ತಪಸ್ಸು

ಚಂದಾಗಿಯೆ

ಮಾಡಬಹುದಿತ್ತಲ್ಲ

ಎಂದರು!


ಡಾ. ಬಸವರಾಜ ಸಾದರ

5 views0 comments
bottom of page