top of page

ತೊಟ್ಟು-೧೫೯

ಕರುಳ ಕೋರಿಕೆ

-----------------

ಸಾಕಷ್ಟು

ಸುಟ್ಟಿದ್ದೀರಿ

ಈ‌, ನೆಲವ,

ಈಗ

ಮತ್ತಾವ

ಕಡ್ಡಿಯನೂ

ಗೀರಬೇಡಿ;

ಉರಿವ

ಬೆಂಕಿಯಲ್ಲಿ

ನಿಮ್ಮ

ಮೈಯ

ಕಾಯಿಸಿಕೊಂಡು,

ಹಡೆದವ್ವನನು

ಬೂದಿ

ಮಾಡಬೇಡಿ.


ಡಾ. ಬಸವರಾಜ ಸಾದರ

6 views0 comments
bottom of page