top of page

ತೊಟ್ಟು

ನಿನ್ನ ಸೇರಿ

ಉಪ್ಪಾಗಲಾರೆ

ಎಂದಿತು

ತನ್ನೆಡೆಗೆ

ಭೋರ್ಗರೆಯುತ್ತ

ಹರಿದುಬಂದ

ನದಿ;

ಅಯ್ಯೋ ಪಾಪ

ಹಾಗೋ!

ಮರಳಿ

ಹೋಗಿಬಿಡು

ಎಂದು ಕೈ‌ಮುಗಿಯಿತು

ಮಹಾಸಾಗರ,

ನಯ

ವಿನಯದಿ.


ಡಾ. ಬಸವರಾಜ ಸಾದರ.

2 views0 comments
bottom of page