top of page

ಕನ್ನಡದ ತೇರು

ಶ್ರೀಪಾದ ಶೆಟ್ಟರು ಕಟ್ಟಿದ ತೇರು

ಹೊರಟಿದೆ ರಸಜಾತ್ರೆ ಗೈಯುತ್ತ ಮುಂದೆ

ತೇರನೆಳೆಯುವವು ಆನೆಗಳು

ಗುಡಿ ಮೇಲೆ ಗುಬ್ಬಿ

ಕಾಸರಗೋಡಿಂದ ಗುಜರಾತ ತನಕ

ನೆಲಜಲವನೊಂದಾಗಿ

ಬೆಸೆದಿಹುದು ತಬ್ಬಿ


ಕುಲದೇವಿ ಶ್ವೇತಾಂಬೆ

ರಥದೊಳಗೆ ಕುಳಿತಿಹಳು

ಕನ್ನಡದ ಕುಸುರಿ

ಸುರಿಯುತ್ತ ಸುರಗಿ

ಬಹುದೊಡ್ಡ ಮಾಲೆ ಕನ್ನಡದ ದೇವಿಗೆ


ಶ್ರೀಪಾದ ಜಾತ ಶ್ರೀ ಪಾರಿಜಾತ

ಅಡಿಯಲ್ಲಿ ನಮನ

ಮುಡಿಯೆಡೆಗೆ ಗಮನ

ಕೈ ಮುಗಿವ ನಮ್ರತೆ

ಬಳಿಬರುವ ವಿಸ್ಮಿತೆ.....

ನೈವೇದ್ಯ ಗೆಣಸೆಲೆ

ಲಾಭವನು ಗಣಿಸಲೇ


ಹುತ್ತಗಟ್ಟಿದ ಪೀಠ

ಅನುಭವದ ಮಂಟಪ

ಏರಿಹಳು ಬಿಳಿದೇವಿ

ಕನ್ನಡದ ಸರಸತಿ

ಸಿರಿಪಾದದೊಡತಿ


ನಿಂತು ನೋಡಲು ಚೆಂದ

ತೇರ, ಹಿಡಿದು ಸಾಗಲು ಹಿಗ್ಗು

ಹಗಲಿಲ್ಲ, ಇರುಳಿಲ್ಲ

ಗಳಿಗೆ ಮುಹೂರ್ತ ಗಳಿಲ್ಲ

ನಿಲ್ಲದೇ ಸಾಗಿಹುದು ಕಬ್ಬಿಗರ ತೇರು

ಶ್ರೀಪಾದ ಶೆಟ್ಟರು ಕಟ್ಟಿದ ತೇರು

ಡಾ. ಜಿ. ಎಸ್. ಹೆಗಡೆ,

ಹಡಿನಬಾಳ.

24 views0 comments
bottom of page