top of page

ಕನ್ನಡ ನಾಡಲಿ


ಕನ್ನಡ ನಾಡಲಿ ಹುಟ್ಟಲು ಬಹಳ ಪುಣ್ಯವು ಬೇಕು ಗೆಳೆಯ

ಕನ್ನಡ ನಾಡದು ರೂಪಿತವಾಗಿ ಪಾವನಗೊಳಿಸಿತು ಇಳೆಯ

ನಮ್ಮೀ ನೆಲದ ಮಣ್ಣದು ಗಂಧ ತುಂಬಿದೆ ಚಂದನ ಶ್ರೀಗಂಧ

ಸುಂದರ ಭಾಷೆ ಬರೆಯಲು ಅಂದ ನುಡಿಯದು ಕೇಳಲು ಕರ್ಣಾನಂದ

ಸಾವಿರ ಸಾವಿರ ವರುಷಕೂ ಹಳೆಯದು

ನಮ್ಮೀ ತಾಯ್ನುಡಿಯು

ಕನ್ನಡವೆಂದರೆ ಹೆಮ್ಮೆಯು ಇರಲಿ ಆಗಲಿ ನಮ್ಮೆದೆಯೇ ಗುಡಿಯು

ನಾಡಿಗೆ ಪಾವನ ನದಿಗಳ ಸಂಗ ಶಿಲ್ಪಕಲೆಯು ಉತ್ತುಂಗ

ಜನಿಸಿದರೆನಿತೊ ವಿಶ್ವಖ್ಯಾತರು ಕನ್ನಡ ನಾಡಿನ ತುಂಬ

ಕನ್ನಡ ಭಾಷೆಯ ಬಳಸುತ ನಾವು ನುಡಿಯನು ಬೆಳೆಸೋಣ

ತೊಲಗಿಸಿ ಮನದ ಕೀಳರಿಮೆಯನು ಕನ್ನಡ ಉಳಿಸೋಣ"


©ವೆಂಕಟೇಶ ಬೈಲೂರು



ನಮ್ಮ ನಡುವಿನ ಭರವಸೆಯ ಕವಿ,ಬರಹಗಾರ ಶ್ರೀ ವೆಂಕಟೇಶ ಬೈಲೂರು ಅವರ "ಕನ್ನಡ ನಾಡಲಿ" ಎಂಬ ಕವಿತೆ ನಿಮ್ಮ ಓದು ಮತ್ತು ಪ್ರತಿಸ್ಪಂದನಕ್ಕಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ


31 views0 comments
bottom of page