top of page

ಅಲ್ಲಿತ್ತು ಗುಬ್ಬಿಗೂಡು

ನಮ್ಮ ಮನೆಯಂಗಳದಿ

ಗಿಡದಲ್ಲೊಂದು

ಗುಬ್ಬಿಗೂಡು

ದಿನನಿತ್ಯ ಚಿಲಿಪಿಲಿ ಹಾಡು

ಅಲ್ಲೇ ಮನೆ

ಸುತ್ತಲೂ ಹಾರಾಟ

ಮೊಟ್ಟೆ ಇದ್ದಿರಬೇಕು ಗೂಡಲಿ

ಅದಕ್ಕೇ ಕಾವಲು ಸರದಿಯಲ್ಲಿ

ಭರ್ರೆಂದು ಹಾರಿ ಬಂತು

ಒಂದು ಗುಂಪು

ಸುತ್ತುಹಾಕಿತು ಅಲ್ಲೆಲ್ಲ

ಅರಿವಾಯಿತು ಅವಕೆ ಅಲ್ಲೇನೂ ಭಯವಿಲ್ಲ

ಕೆಲಸ ಮುಗಿಯಿತು

ಮತ್ತೆ ಹಾರಿತು

ಬಂತು ಇನ್ನೊಂದು ಗುಂಪು

ಚಿಲಿಪಿಲಿ ಕಲರವದ ಇಂಪು

ಚಿಂವ್ --ಚಿಂವ್--ಚಿಂವ್--

ಸದ್ದು ಸದಾ

ಮೊಟ್ಟೆ ಮರಿಯಾಗಬೇಕು

ಅದಕ್ಕಾಗೇ ಹಗಲಿರುಳೂ ಕಾಯಬೇಕು

ಗುಬ್ಬಿ ಸಂತತಿ ಕೆಲವು ಕಡೆ

ನೋಡಲಿಕ್ಕೂ ಇಲ್ಲ

ನಮ್ಮ ಮನೆ ಮುಂದೆ ಮಾತ್ರ

ನೋಡಲಿಕ್ಕುಂಟು ಗುಬ್ಬಿಗಳ

ವಿವಿಧ ಗಾತ್ರ


ವೆಂಕಟೇಶ ಹುಣಶಿಕಟ್ಟಿ


ನಿತ್ಯೋತ್ಸಾಹದ ಕವಿ,ಚಿಂತಕ,ಬರಹಗಾರ,ಸಮಾಜಮುಖಿ ಪ್ರೊ.ವೆಂಕಟೇಶ ಹುಣಶಿಕಟ್ಟಿಯವರು ತಮ್ಮ ಮನೆಯಂಗಳದಲ್ಲಿ ಕಂಡ ಗುಬ್ಬಿ ಗೂಡಿನಿಂದ ಪ್ರೇರಣೆಗೊಂಡು ಬರೆದ ಮಕ್ಕಳ ಕವಿತೆ " ಅಲ್ಲಿತ್ತು ಗುಬ್ಬಿಗೂಡು" ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ





18 views0 comments
bottom of page