top of page

ಅನಿರೀಕ್ಷಿತ

ಹೋದ

ಹೋದನವ

ಮೇಲೆ

ಹೋದ

ಆಸೆ-ಆಕಾಂಕ್ಷೆ

ಎಲ್ಲ ಕಟ್ಟಿಟ್ಟು

ಇಲ್ಲೇ

ಹೋದ

ಬರಿಗೈಲಿ


ಲಕ್ಷ ಗಳಿಕೆ

ಕೋಟಿ ಗಳಿಕೆ

ಲೆಕ್ಕ ಸಿಗದಷ್ಟು

ಮತ್ತೆ

ದಕ್ಕಲಿಲ್ಲ

ಸಾಯುವಾಗ

ಜೀವ

ಉಳಿಸಲಿಲ್ಲ


ಕೊರೋನಾ ಕೆಂಗಣ್ಣು

ಬಿದ್ದೇಬಿಟ್ಟಿತು

ಸದ್ದಿಲ್ಲದೆ

ವಕ್ಕರಿಸಿತು


ನರಳಿತು ಜೀವ

ಹಂಬಲಿಸಿತು

ಬಂಧು-ಬಾಂಧವರಿಗಾಗಿ

ಬರಲಿಲ್ಲ

ಯಾರೂ


ಆಸೆ ಮಣ್ಣಾಯ್ತು

ಭರವಸೆ ಬೂದಿಯಾಯ್ತು

**""**""****


*ಪ್ರೊ.ವೆಂಕಟೇಶ ಹುಣಶೀಕಟ್ಟಿ

17 views0 comments
bottom of page