top of page

ಅಂಗಡಿಗಳಲ್ಲಿ ಸಾಮಾನಿಲ್ಲ

ಚಿಲ್ಲರೆ ಗೂಡಂಗಡಿಗಳನ್ನು ಇಟ್ಟುಕೊಂಡಿದ್ದಾರೆ

ನಮ್ಮ ಸಾಹಿತಿಗಳು

ಪದವಿ ಪ್ರಶಸ್ತಿಗಳು ಬಿಕರಿಗಿವೆ

ಕಾಸಿಗೊಂದು ಕೊಸರಿಗೊಂದು

ಫಲಕಗಳನ್ನು ಕೊಂಡುಕೊಳ್ಳುತ್ತ

ದೇಶಾವರಿ ನಗುಗಳನ್ನು ನಕ್ಕುಕೊಳ್ಳುತ್ತ

ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತ


ಅಂಗಡಿಗಳಲ್ಲಿ ಸಾಮಾನಿಲ್ಲ

ಬರಿದಾಗಿವೆ ಪೆಟ್ಟಿಗೆ ಭರಣಿಗಳು

ತಟ್ಟಿ ಕಳಚಿ ಬೀಳುವಂತಿದೆ

ಸೂರು ಸೋರುತ್ತಿದೆ

ಅಂಗಡಿಯಲ್ಲಿ ಯಜಮಾನನಿಲ್ಲ


ಹಾರು ಹೊಡೆಯುತ್ತಿವೆ ರಸ್ತೆ ಬೀದಿಗಳು

ವ್ಯಾಪಾರವಿಲ್ಲ ಜನರ ಓಡಾಟವಿಲ್ಲ

ಪಕ್ಕದವನಿಗೆ ಹೇಳಿ ತೆರಳಿದ್ದಾನೆ

ರಾಜಕೀಯ ಪ್ರಚಾರಕ್ಕೆ

ಸದ್ದಿಲ್ಲದೆ


ಅಳಿದುಳಿದ ಒಬ್ಬನೋ ಇಬ್ಬರೋ

ಹೊಡೆಯುತ್ತಿದ್ದಾರೆ

ಕಸ ಧೂಳು

ಒರೆಸುತ್ತಿದ್ದಾರೆ

ಇರುವೆ ಮುತ್ತಿದ ಪೆಪ್ಪರಮಿಂಟು

ಚರುಮುರಿ ತಿಂದು ಬಿಸಾಡಿದ ಪೇಪರಿನ ತುಂಡು

ಲಾಲಿಪಾಪಿನ ದಂಟು


ರಸ್ತೆ ಅಗಲವಾಗುತ್ತಿದೆ

ಅಂಗಡಿಗಳನ್ನು ತೆರವುಗೊಳಿಸಬೇಕಂತೆ

ಬಿಸಿಲೇರುತ್ತಿದೆ ಮೋಡವೂ

ಬರಬಹುದು ಮಳೆ ಇಂದು

ಅಥವಾ ನಾಳೆ.


- ಡಾ. ವಸಂತಕುಮಾರ ಪೆರ್ಲ

6 views0 comments
bottom of page