ಗದಗ - ಹೊಂಬಳದ ಕನ್ನಡದ ಕುವರ!
"ಚೆಂಬೆಳಕು " ಮನೆಯಿಂದ ಸಾಗಿದರೆ ಬಹುದೂರ!!
ಜೀವಧ್ವನಿಯಾಗಿದ್ದ ಕವಿತೆಗಳ ನೀಡಿ!
ನಾಡಗೀತೆಯ ಸೌಗಂಧ ಎಲ್ಲೆಡೆ ಹರಡಿ!
ಹೋಗ ಬೇಕಲ್ಲಿಗೆ ಎಲ್ಲರೂ -ಒಂದಲ್ಲಾ ಒಂದು ದಿನ!
ಸರಳ ವ್ಯಕ್ತಿತ್ವ - ಸಜ್ಜನಿಕೆಯ ನೆನಪಿಸುವುದು ಮನ!!
ಕಥೆಗಾರ್ತಿ ಶಾಂತಾದೇವಿ - ಹಲವು ಕೃತಿಗಳ ಒಡತಿ!
ಅವರಾಗಿದ್ದರು ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿ!!
ದಯೆಯೇ ಧರ್ಮದ ಮೂಲವೆಂದವರು!
ಪ್ರಶಸ್ತಿ - ಗೌರವಗಳಿಗೆ ಭಾಜನರಾದವರು!!
ಹೊರಟು ಹೋದಿರಾ... ಮಹಾಮನೆಗೆ!!
ಭವ ಬಂಧನವ ಕಳಚಿ ದೇವ ಸನ್ನಿಧಿಗೆ!!
ಕನ್ನಡದಾರತಿಯ ಬೆಳಗಿಸಿದ ಹಿರಿಯ ಕಾವ್ಯ ಚೇತನ!!
ಸಾಹಿತ್ಯದ ಕೊಡುಗೆ - ಸಾರ್ಥಕದ ಬದುಕಿಗೆ ನನ್ನದಿದೋ ನಮನ!!
ಸಾವಿತ್ರಿ ಶಾಸ್ತ್ರಿ, ಶಿರಸಿ
ಉತ್ತರಕನ್ನಡ ಜಿಲ್ಲೆ.
