ಓ,,,,ಬಾರತಾಂಬೆಯ
ವೀರ ಪುತ್ರ......
ನೀ ಉಗ್ರರ ಗುಂಡಿಗೆ
ಗುಂಡಿಗೆಯೊಡ್ಡಿದ್ದು
ವ್ಯರ್ಥವಾಗುವದಿಲ್ಲ
ಎಂದಿಗೂ.
ನೀ ಸತ್ತರೂ ಬದುಕಿ
ಬದುಕಿಬರುತ್ತೀಯ
ವರ್ಷದಲ್ಲಿ ಕೆಲವುಸಲ--
ರಾಷ್ಟ್ರೀಯ ಹಬ್ಬಗಳಲ್ಲಿ...
ಅಗಷ್ಟ ೧೫,ಜನವರಿ೨೬
ಇತ್ಯಾದಿಗಳಲ್ಲಿ.....
ಚುನಾವಣೆ ಸಮಯದಲ್ಲಿ...
ರಾಜಕೀಯ ಬದಲಾವಣೆಗಳಲ್ಲಿ....
'ಪರಮವೀರಚಕ್ರ'ಪೋಟೊ
ರಾಜಕೀಯ ನಾಯಕರ
ಘೋಷಣೆ,ಬಾಷಣಗಳಲ್ಲಿ...!
ಬೇಸರಿಸ ಬೇಡ ಗೆಳೆಯ..
ಇದು,,,ಸಹಜ, ಆಟದ-
ಮೈ'ದಾನ'ದಲ್ಲಿ ಆಟಗಾರ
ಸತ್ತರೂ,ಸೋತರೂ
'ಕ್ಯಾಪ್ಟನ್'ಗಳ ಮುಗುಳ್ನಗು,
ಕೈ ಕುಲುಕುವಿಕೆ,
ಸಹಜ ನಡೆ ,ನಡೆಯುತ್ತದೆ--
ಇನ್ನೊಂದು 'ಆಟ'ದವರೆಗೆ.
ನಾವು ಭಾರತೀಯರು,
ನಮ್ಮ ಹಿಂದೆ ನಿನ್ನಂತ-
ಸಹಸ್ರಾರು ಬಲಿದಾನಿಗಳ
ಇತಿ 'ಹಾಸ' ಇದೆ.ಗೆಳೆಯಾ....
ತೆರವಾಗಿದೆ ಬಲಿಪೀಠ.
ರಕ್ತದ ಕಲೆಗಳನ್ನೆಲ್ಲಾ
ಕಣ್ಣೀರಿನಿಂದ ಉಜ್ಜಿ
ಸ್ವಸ್ಛಗೊಳಿಸಾಗಿದೆ.
ಕಣ್ಣಕಟ್ಟಿದ ಬಲಿಪಶು
ಮುಂದೊಂದುದಿನ,
ಬರಲೇಬೇಕು.ನಮ್ಮೆಲ್ಲರ
ಒಳಿತಿಗಾಗಿ ಬರಲೇಬೇಕು
ತೆರವಾದ ಬಲಿಪೀಠಕ್ಕೆ.
ಆವೇಶದಿಂದ ಕೂಗಾಡುತ್ತೇವೆ,
ತ್ರಿವರ್ಣ ಧ್ವಜಹಿಡಿದು....--
"ಭಾರತ ಮಾತಾಕಿ ಜೈ"
ಎನ್ನುತ್ತೇವೆ.
ಎಂದಿನ ಪರಿಪಾಠದಂತೆ
ಎಲ್ಲ ಸುಸೂತ್ರವಾಗಿ
ನಡೆಯುತ್ತದೆ,,,ಇಂದೂ
ಎಂದೆಂದೂ.
ಗೆಳೆಯಾ,,ನೀ ಕಾಣದೂರಿನಲ್ಲಿ
ಕುಳಿತು ,ಮುಗುಳ್ನಗುತ್ತಾ
ನೋಡುತ್ತಿರು,ನಿನ್ನ,ನಿನ್ನಂಥವರ
ಸಾವಿನ ಸಾರ್ಥಕತೆಯ
'ಭಾರತೀಯತೆ'ಯ.
--ಅಬ್ಳಿ,ಹೆಗಡೆ.*
Comments