top of page

ತೊಟ್ಟು

ಹಂಡೆ-ತಪೇಲಿ-ತಾಲಿ-ತಂಬಿಗೆ

ಎಲ್ಲ ಖಾಲಿ ಮಾಡುತ್ತಾರೆ

ಗ್ರಹಣ ಹಿಡಿದಾಗ ಮನುಷ್ಯರು;

ಕೆರೆ-ಬಾವಿ-ನದಿ-ಸಮುದ್ರಗಳ

ನೀರನೆಲ್ಲಿ ಚೆಲ್ಲುತ್ತಾರೆಂದು

ಗಹಗಹಿಸಿ ನಗುತ್ತಾರೆ,

ಸೂರ್ಯ-ಚಂದ್ರರು.


ಡಾ. ಬಸವರಾಜ ಸಾದರ.

--- + ---

13 views0 comments

©Alochane.com 

bottom of page