top of page

ತೊಟ್ಟು-೧೩೫

ಜೀವಂತ ದೇವರು


ಕಲ್ಲು ಕಟೆದು

ಚಿನ್ನ ಕರಗಿಸಿ

ಮಣ್ಣು ಮಿದ್ದಿ

ಕಟ್ಟಿಗೆ ಕೊರೆದು

ದೇವರ

ಮೂರ್ತಿಗಳ

ಮಾಡುತ್ತಲೇ

ಬಂದಿದ್ದಾನೆ

ಮನುಷ್ಯ!

ತನ್ನೊಳಗಿನ

ದೇವರನ್ನು

ಕಂಡುಕೊಳ್ಳಲು

ಇನ್ನೂ

ಆಗಿಯೇ ಇಲ್ಲ

ಅದೇ

ಮನುಷ್ಯ!!


ಡಾ. ಬಸವರಾಜ ಸಾದರ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

コメント


©Alochane.com 

bottom of page