top of page

ಗಾಂಧಿ ಪ್ರತಿಮೆ ಮತ್ತು ನಾನು.

ಬೆಳದಿಂಗಳ ರಾತ್ರಿಯಲ್ಲಿ

ಮೈದುಂಬಿದ ಚಂದ್ರ

ದಟ್ಟವಾಗಿ ಹರಡಿದ ನಕ್ಷತ್ರಗಳು

ಧೂಳು ತುಂಬಿದ

ಟಾರ್ [ಡಾಂಬರು ] ರಸ್ತೆಯ ಮೇಲೆ

ಹಾಲ್ ಚೆಲ್ಲಿದಂತೆ ಬೆಳದಿಂಗಳು

ಆ ಕತ್ತಲೆಯ ಮೌನದಲ್ಲಿ

ಇದ್ದವರು ನಾವಿಬ್ಬರೇ

ಗಾಂಧಿ ಪ್ರತಿಮೆ ಮತ್ತು ನಾನು.


ಸರ್ಕಲ್ಲಿನಲ್ಲೀಗ ನಿಶ್ಯಬ್ದ !

ಮಾಯಾನಗರಿಯ ಬೆಳಕಿನಾಟ ಮುಗಿದು

ದಿಕ್ಕು ದಿಕ್ಕಿಗೂ ಓಡಾಡಿದ ಗಾಡಿಗಳು

ಈಗ ಅದೃಶ್ಯ ...!

ಗಾಲಿಗಳ ಉರುಳಾಟದಿಂದ ಇನ್ನೂ

ಹವೆಯಾಡುತ್ತಿದ್ದ ರಸ್ತೆ

ಮನದೊಳಗೇ ಒಂದು ಪ್ರಶ್ನೆ

ಈ ಶಾಂತಿದೂತನ ದಿಕ್ಕು

ಬದಲಿಸಿದ್ದು ಯಾವಾಗ...?

ಗಾಡಿಗಳನ್ನೇರಿ ಕನಸುಗಳ

ಬೆನ್ನಟ್ಟ ಓಡಾಡುವಾಗ

ಇದನ್ನಾರೂ ಗಮನಿಸಲಿಲ್ಲವೇ...?

ಸರ್ಕಲ್ ನ ಸಿಗ್ನಲ್ ಗೆ ನಿಂತಾಗ

ಹಸಿರು ದೀಪಕ್ಕಾಗಿ ದಿಟ್ಟಿಸುತ್ತಾ

ಸೋಲುವ ಕಣ್ಣುಗಳು

ಇವರತ್ತ ಬೀರಲಿಲ್ಲವೇ...?!


ತೇಲಿ ಬರುವ ಗಾಳಿಯು

ಕೇಳಿರದ ಕಥೆಗಳನ್ನು

ಪಿಸುಗುಟ್ಟುತ್ತಲೇ ಇರುವಾಗ

ಶೀತಲವಾಯ್ತು ಕತ್ತಲಷ್ಟೇ ಅಲ್ಲ

ಮನಸ್ಸು ಕೂಡಾ..!!


- ಪ್ರಭಾಕರ ತಾಮ್ರಗೌರಿ ಗೋಕರ್ಣ 

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Kommentare


©Alochane.com 

bottom of page