Dec 4, 20201 min read ಕವಿ [ಕವನ]ಮನದುಂಬಿ ಹಾಡಿದೆನುನನ್ನ ತೋಟದ ಮೊಗ್ಗುಹಾಡು ಕೇಳುತ್ತ ಹೂವಾಯ್ತು ;ನೀನು ಕವಿಯೆಂದು ಉಲಿಯುತ್ತಕಾಡಿನ ಹಕ್ಕಿ ಆಕಾಶಕ್ಕೆ ನೆಗೆಯಿತು.ಆದರೆ ನಾನು ಕವಿಯಾಗಲಿಲ್ಲ!ಪತ್ರಿಕೆಗಳು ನನ್ನ ಕವನ ಮುದ್ರಿಸಲಿಲ್ಲ ;ಜನ ಗುರುತಿಸಲಿಲ್ಲ.ನಾನು ಗಡ್ಡ ಬಿಟ್ಟೆ ;ತೋಳಿಗೆ ಜೋಳಿಗೆ ಏರಿಸಿದೆ.ಜನ ನನ್ನ ಕವಿಯೆಂದರು.ಪತ್ರಿಕೆಗಳ ವಿಶೇಷಾಂಕಗಳಬಣ್ಣ ಬಣ್ಣದ ಪುಟಗಳಲ್ಲಿನನ್ನ ಕವನಗಳು ಮೂಡಿದವು.ನಾನು ಕವಿಯಾದೆ !ಸಂಭ್ರಮಿಸಿದೆ !ಯಾಕೋ ನನ್ನ ತೋಟದ ಮೊಗ್ಗು ಅರಳುವುದನ್ನು ಮರೆತು ಕೂತಿದೆ.ಮರದ ಮೇಲೆ ಕೂತ ಕಾಡಿನ ಹಕ್ಕಿ ಉಲಿಯದೇ ಮೌನವಾಂತಿದೆ. - ಶ್ರೀಪಾದ ಹೆಗಡೆ, ಸಾಲಕೋಡ
ಮನದುಂಬಿ ಹಾಡಿದೆನುನನ್ನ ತೋಟದ ಮೊಗ್ಗುಹಾಡು ಕೇಳುತ್ತ ಹೂವಾಯ್ತು ;ನೀನು ಕವಿಯೆಂದು ಉಲಿಯುತ್ತಕಾಡಿನ ಹಕ್ಕಿ ಆಕಾಶಕ್ಕೆ ನೆಗೆಯಿತು.ಆದರೆ ನಾನು ಕವಿಯಾಗಲಿಲ್ಲ!ಪತ್ರಿಕೆಗಳು ನನ್ನ ಕವನ ಮುದ್ರಿಸಲಿಲ್ಲ ;ಜನ ಗುರುತಿಸಲಿಲ್ಲ.ನಾನು ಗಡ್ಡ ಬಿಟ್ಟೆ ;ತೋಳಿಗೆ ಜೋಳಿಗೆ ಏರಿಸಿದೆ.ಜನ ನನ್ನ ಕವಿಯೆಂದರು.ಪತ್ರಿಕೆಗಳ ವಿಶೇಷಾಂಕಗಳಬಣ್ಣ ಬಣ್ಣದ ಪುಟಗಳಲ್ಲಿನನ್ನ ಕವನಗಳು ಮೂಡಿದವು.ನಾನು ಕವಿಯಾದೆ !ಸಂಭ್ರಮಿಸಿದೆ !ಯಾಕೋ ನನ್ನ ತೋಟದ ಮೊಗ್ಗು ಅರಳುವುದನ್ನು ಮರೆತು ಕೂತಿದೆ.ಮರದ ಮೇಲೆ ಕೂತ ಕಾಡಿನ ಹಕ್ಕಿ ಉಲಿಯದೇ ಮೌನವಾಂತಿದೆ. - ಶ್ರೀಪಾದ ಹೆಗಡೆ, ಸಾಲಕೋಡ
Comentarios