top of page

ಮಹಾಭಾರತ ಹನಿಗವನಗಳು
ಸಾಟಿ ***** ಬರಿ ಐವರಿದ್ದರೇನು ಪಾಂಡವರು ನೂರಿದ್ದೂ ಸಾಟಿಯಾಗಲಿಲ್ಲ ಕೌರವರು! ಕರ್ಣ ***** ವೈರಿಯಾದರೂ ಪಾಂಡವರಿಗೆ ಕರ್ಣ ಅದೇ ಬಳ್ಳಿಯ ಪರ್ಣ! ಮಹಾಭಾರತ ************ ಪ್ರಾರಂಭ ಪಗಡೆಯಾಟ ಮುಕ್ತಾಯ ಹೊಡೆದಾಟ! ಮರಣ ಶಾಸನ ************** ದ್ರೌಪದಿಯ ಮುಡಿ ಹಿಡಿದು ಸಭೆಗೆ ಎಳೆದು ತಂದಾಗಲೇ ದುಶ್ಯಾಸನ ಬರೆದುಕೊಂಡ ತನ್ನ ಬದುಕಿಗೆ ಮರಣ ಶಾಸನ! ಕಲಿವುದೇನು? ************ ಮಹಾಭಾರತದಿಂದ ಕೊನೆಗೂ ಕಲಿವುದೇನು ಮನುಜ? ತುಂಡು ನೆಲಕ್ಕಾಗಿ ಬಡಿದಾಡಿದರೆ ಬಂಧುಗಳನ್ನೆಲ್ಲ ಕಳೆದುಕೊಳ್ಳುವ ನಿಜ ವೆಂಕಟೇಶ ಬೈಲೂರು ಸೃಜನಶೀಲ ಕವಿ ವೆಂಕಟೇಶ ಬೈಲೂರ ಅವರು ಮಹಾಭಾರತದ ಕುರಿತು ಬರೆದಿರುವ ಹನಿಗವನಗಳು ನಿಮ್ಮ ಓದಿಗಾಗಿ ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

bottom of page