ಪ್ರಸ್ತುತ
ಸಂಪುಮಾಡಿ ಶಾಂತಿಮಂತ್ರ ಜಪಿಸಿದರೂ ಅಸ್ಪ್ರಶ್ಯತೆ ಧರೆಯಿಂದ ಮಾಯವಾಗಲೇಇಲ್ಲ ತಂದೆ ಮಗಳ ಮೇಲೆ ಅಣ್ಣ ತಂಗಿಯ ಮೇಲೆ ಕಾಮಾಂಧರ ಅಟ್ಟಹಾಸಕೆ ಮಾನವೀಯತೆಯೇ ಮಣ್ಣುಪಾಲಾಗಿದೆ ಕೋಮುಕೋಮುಗಳಲ್ಲಿ ಕಾವೇರಿಸಿ ಕಾಣದ ಕೈಗಳು ತಮ್ಮ ಬೇಳೆ ಬೇಯಿಸಿಕೊಳ್ಳವ ಬೆರಕೆ ಬುದ್ದಿಯವರು ಹಸಿವಿನಿಂದ ಬಳಲುವ ಹಸಿಕೂಸು ಕಂದಮ್ಮಗಳ ಕೂಗು ಕೇಳುವವರಿಲ್ಲದೆ ಮೂಕವಾಗಿಬಿಟ್ಟಿವೆ ಕಸದ ತೊಟ್ಟಿ ಯಲ್ಲಿ ಹೆಣ್ಣು ಭ್ರೂಣವನ್ನು ನುಂಗಲು ಶ್ವಾನಗಳ ಮಧ್ಯೆ ಪೈಪೋಟಿಯ ಕಾದಾಟ ಅನ್ನದಾತೋ ಸುಖೀ ಭವೋಃಎಂದು ತಲೆನೇವರಿಸಿ ಅವನುಬೆಳೆದ ಬೆಳೆಗೆ ಮೂರು ಕಾಸು ನೀಡಿ ಮಧ್ಯ ವರ್ತಿ ತನ್ನ ಖಜಾನೆ ತುಂಬಿಸಿ ಸಾಲಭಾದೆ ತಾಳಲಾರದೆ ಹಾಲಾಹಲ ನುಂಗಿ ಶವವಾಗುವ ಅನ್ನದಾತ ಅಮಾಯಕರ ಕಿವಿಗೆ ಹೂವನಿಟ್ಟು ಗಗನ ಚುಂಬಿ ಇಮಾರತುಗಳ ನಿರ್ಮಿಸಿ ಕೋಟಿ ಕೋಟಿ ದೋಚುವ ಭೂಗಳ್ಳರು ನಿರುದ್ಯೋಗವನ್ನೆಲ್ಲಾ ನಿರ್ಮೂಲನೆ ಮಾಡುತ್ತೇವೆ ಎಂದು ಪ್ರಣಾಳಿಕೆ ಯಲ್ಲಿ ಆಣೆ ಪ್ರಮಾಣ ಮಾಡಿ ಹೇಳಿ ಪ್ರತಿಮೆ ನಿರ್ಮಿಸುವುದರಲ್ಲೇ ಮಗ್ನರಾಗಿದ್ದಾರೆ ಪ್ರತಿಭೆ ಗಳೆಲ್ಲಾ ಪಲಾಯನವಾಗಿ ಮೋಸ ದಗಲ್ ಬಾಜಿಗಳ ದರಬಾರಾಗಿದೆ ಅಂದು ತ್ರೇತಾಯುಗದಲ್ಲಿ ವೈದೇಹಿ ತನ್ನ ಪಾವಿತ್ರ್ಯತೆಯನ್ನು ಸಾಬೀತು ಪಡಿಸಲು ಅಗ್ನಿ ಪ್ರವೇಶ ಗೈದಂತೆ ಯತ್ರನಾರ್ಯಸ್ತೋ ಪೂಜ್ಯಂತೆ ರಮಂತೆ ತತ್ರ ದೇವತಾ ಎಂಬ ದೇಶದಲ್ಲಿ ಕನ್ಯತ್ವ ಪರೀಕ್ಷೆ ಯೇ ಕಗ್ಗಂಟಾಗಿದೆ ಕುಲದ ಪ್ರತಿಷ್ಟೆಗಾಗಿ ಮರ್ಯಾದಾ ಹತ್ಯೆಗೆ ಮರಣ ಹೋಮವಾಗುತ್ತಿವೆ ಯುವಜೀವಗಳು ವರದಕ್ಷಿಣೆ ಯ ಕಾಟದ ಕಾವಿಗೆ ಸುಟ್ಟು ಕರಕಲಾಗಿದೆ ಮನೆ ಬೆಳಗುವ ಸೊಸೆ ಇಲ್ಲದ ರೊಗಕ್ಕೆ ಕಲಬೆರಕೆಯ ಔಷಧಿ ಹೀರಿ ಡ್ರಗ್ ಮಾಫಿಯಾಗೆ ಬಲಿಯಾದ ಶವಾಗಾರದಲ್ಲಿ ಇಟ್ಟ ಅನಾಥ ಶವ ಕರುಳು ಸುಡುವ ಕಳಬಟ್ಟಿ ಕುಡಿದು ಹೊಟ್ಟೆ ಹಿಡಿದು ವಿಲ ವಿಲ ಒದ್ದಾಡಿ ಉಸಿರು ಬಿಡುವ ಬಡ ಜೀವದ ಮೇಲೆ ಮಡದಿ ಮಕ್ಕಳ ಆಕ್ರಂದನ ಖಾಕಿ ಪರೀಕ್ಷೆ ಯಲ್ಲಿ ಕೋಟಿ ಕೋಟಿ ನುಂಗಿ ಮರು ಪರೀಕ್ಷೆ ಬರೆಯಿರಿ ಸಾಂತ್ವನಿಸುವ ನುಂಗಣ್ಣರು ಸರ್ವಸಂಗ ಪರಿತ್ಯಾಗಿ ಎಂದು ವೇಷತೊಟ್ಟು ಕಾಮಪುರಾಣ ಬಟಾಬಯಲಾಗಿ ಜೈಲು ಪಾಲಾದ ಅರ್ಜುನ ಸನ್ಯಾಸಿ..!! ಅನಿಲ ಕಾಮತ ಸಿದ್ದೇಶ್ವರ ಕವಿ ಕಲಾವಿದ ವರ್ತಕ ಹನಿಗವನಗಳ ಕರ್ತೃ ಅನಿಲ ಕಾಮತ ಸಿದ್ದೇಶ್ವರ ಅವರ ಪ್ರಸ್ತುತ ಕವನ ನಿಮ್ಮ ಓದಿಗಾಗಿ. ಸಂಪಾದಕ ____________ _______________________