top of page

#ಸ್ವಾಭಿಮಾನದಿಂ

Updated: Oct 31, 2021

ಬದುಕಿನಾರ್ಭಟದೊಳ್

ಬಾಗಿಹನೈ ಮುದುಕನಂತೆ

ಹೊಸಕಿ ಹಾಕಿತೇನ್ ಹಣೆಬರಮು

ಬದುಕ ಬವಣೆಗಳೊಳಗೆ

ಉರಿದುರಿದು

ಬಾಳ್ಗೊನೆಯು ಬರಿದಾಯಿತೆ ?


ಸುರಿಸುರಿದುವೇನ್ ಹಳತ

ಹಣೆಇಳಿದು ಎದೆವರೆಗೆ

ಮಡುಗಟ್ಟಿತೇನ್ ತುಡಿಪ ರಕ್ತಂ!!


ಎಳೆಮೆಳೆದು ದೂರದೂರಿಂಗೆ ಪುಂಡಿಯ ಬಂಡಿಯನ್

ಪುಡಿ ಪುಡಿಯೊಳ್

ಬದುಕನ್ ಹಿಡಿದಿಡುತೆ

ಪುಡಿಗಾಸೇ ಅನ್ನಂ! ವಸ್ತ್ರಂ !!


ಎಡರು-ತೊಡರುಗಳೇನ್

ಪರ್ವತವೇನ್

ಮನಸಿರಲ್ ಮಾರ್ಗಂಗಳೆಂಟು ಇರ್ಕುಂ!

ಸ್ವಾಭಿಮಾನಂ ಬದುಕಾಗಿರಲ್

ಅದಾವ ಅರ್ಥಮುಂ ಕೀಳಲ್ಲ

ಎಂದನೈ

ಹುಲುಮಾನವ ಸಾರ್ತಕತೆಯೊಳ್ !!!


*ಕೇಶವ ಭಟ್ಟ , ಚಿಮ್ನಳ್ಳಿ.




34 views0 comments
bottom of page