top of page

ನೆಮ್ಮದಿಯ ಹೋಮ

ಕಣ್ಣುರಿಸುವ ಹೊಗೆ-ಬೆಂಕಿ ಮನೆಯಲ್ಲಿ

ಸುರುಕು-ಸುರ್ವಾಗಳ ಎಡೆಬಿಡದ ಏರಿಳಿತ ಅರ್ಘ್ಯಾದಿ ಐವತ್ನಾಲ್ಕು ಸಂಯುಕ್ತಗಳು ಅಗ್ನಿ ಪಾಲು,

ಸುರುಕುಗಳ ಲೆಕ್ಕಕ್ಕೆ ಪ್ರತಿಯಾಗಿ ಮನೋವಾಂಛೆಗಳನೆಲ್ಲ ವರವಾಗಿಸುವ ದ್ವಿಪಕ್ಷ ಒಪ್ಪಂದ ದೇವರೊಡನೆ...

ಅಗ್ನಿದೇವನ ಪ್ರೀತ್ಯರ್ಥ

ಹವಿಸ್ಸುಗಳ ಪ್ರದಾನ ಮನೆಯಲ್ಲಿ

ಅನಿಷ್ಟಗಳ ಕಳೆಯಲು, ಮನದಲ್ಲಲ್ಲ..!ಮನೆಯಲ್ಲಿ ನೆಮ್ಮದಿ ಮನೆ ಮಾಡಲು..!


ಈ ಸದ್ದು ಗದ್ದಲದ‌ ನಡುವೆ ಫೋನು ರಿಂಗಣಿಸಿತು ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು....

ಅರೇ ಹಿತವಾಗಿದೆ ದನಿ ; ಭಾವ ಕೂಡ ; ಧರ್ಮ-ದೇಶ-ಕಾಲಾತೀತ ದೃಷ್ಟಿ. ಆದರೇನು? ಅದರದೇನು ಮಹತ್ವ? ಏಕೆಂದರೆ ಅದು ತಿಳಿಯುವಂತಿದೆ, ಗೊಂದಲಗಳಿಲ್ಲದೆ ಮನ ಮುಟ್ಟುವಂತಿದೆ..

ನಮಗೋ ತಿಳಿಯದ ಗೊಂದಲದಲ್ಲೇ ಸುಖ,

ಶೋ ಆಫುಗಳಿಗಷ್ಟೇ ಲೆಕ್ಕ.



- ಸಂತೋಷಕುಮಾರ ಅತ್ತಿವೇರಿ

40 views0 comments
bottom of page