top of page

ತೆರವಾದ ಬಲಿಪೀಠ

ಓ,,,,ಬಾರತಾಂಬೆಯ

ವೀರ ಪುತ್ರ......

ನೀ ಉಗ್ರರ ಗುಂಡಿಗೆ

ಗುಂಡಿಗೆಯೊಡ್ಡಿದ್ದು

ವ್ಯರ್ಥವಾಗುವದಿಲ್ಲ

ಎಂದಿಗೂ.

ನೀ ಸತ್ತರೂ ಬದುಕಿ

ಬದುಕಿಬರುತ್ತೀಯ

ವರ್ಷದಲ್ಲಿ ಕೆಲವುಸಲ--

ರಾಷ್ಟ್ರೀಯ ಹಬ್ಬಗಳಲ್ಲಿ...

ಅಗಷ್ಟ ೧೫,ಜನವರಿ೨೬

ಇತ್ಯಾದಿಗಳಲ್ಲಿ.....

ಚುನಾವಣೆ ಸಮಯದಲ್ಲಿ...

ರಾಜಕೀಯ ಬದಲಾವಣೆಗಳಲ್ಲಿ....

'ಪರಮವೀರಚಕ್ರ'ಪೋಟೊ

ರಾಜಕೀಯ ನಾಯಕರ

ಘೋಷಣೆ,ಬಾಷಣಗಳಲ್ಲಿ...!

ಬೇಸರಿಸ ಬೇಡ ಗೆಳೆಯ..

ಇದು,,,ಸಹಜ, ಆಟದ-

ಮೈ'ದಾನ'ದಲ್ಲಿ ಆಟಗಾರ

ಸತ್ತರೂ,ಸೋತರೂ

'ಕ್ಯಾಪ್ಟನ್'ಗಳ ಮುಗುಳ್ನಗು,

ಕೈ ಕುಲುಕುವಿಕೆ,

ಸಹಜ ನಡೆ ,ನಡೆಯುತ್ತದೆ--

ಇನ್ನೊಂದು 'ಆಟ'ದವರೆಗೆ.

ನಾವು ಭಾರತೀಯರು,

ನಮ್ಮ ಹಿಂದೆ ನಿನ್ನಂತ-

ಸಹಸ್ರಾರು ಬಲಿದಾನಿಗಳ

ಇತಿ 'ಹಾಸ' ಇದೆ.ಗೆಳೆಯಾ....

ತೆರವಾಗಿದೆ ಬಲಿಪೀಠ.

ರಕ್ತದ ಕಲೆಗಳನ್ನೆಲ್ಲಾ

ಕಣ್ಣೀರಿನಿಂದ ಉಜ್ಜಿ

ಸ್ವಸ್ಛಗೊಳಿಸಾಗಿದೆ.

ಕಣ್ಣಕಟ್ಟಿದ ಬಲಿಪಶು

ಮುಂದೊಂದುದಿನ,

ಬರಲೇಬೇಕು.ನಮ್ಮೆಲ್ಲರ

ಒಳಿತಿಗಾಗಿ ಬರಲೇಬೇಕು

ತೆರವಾದ ಬಲಿಪೀಠಕ್ಕೆ.

ಆವೇಶದಿಂದ ಕೂಗಾಡುತ್ತೇವೆ,

ತ್ರಿವರ್ಣ ಧ್ವಜಹಿಡಿದು....--

"ಭಾರತ ಮಾತಾಕಿ ಜೈ"

ಎನ್ನುತ್ತೇವೆ.

ಎಂದಿನ ಪರಿಪಾಠದಂತೆ

ಎಲ್ಲ ಸುಸೂತ್ರವಾಗಿ

ನಡೆಯುತ್ತದೆ,,,ಇಂದೂ

ಎಂದೆಂದೂ.

ಗೆಳೆಯಾ,,ನೀ ಕಾಣದೂರಿನಲ್ಲಿ

ಕುಳಿತು ,ಮುಗುಳ್ನಗುತ್ತಾ

ನೋಡುತ್ತಿರು,ನಿನ್ನ,ನಿನ್ನಂಥವರ

ಸಾವಿನ ಸಾರ್ಥಕತೆಯ

'ಭಾರತೀಯತೆ'ಯ.



--ಅಬ್ಳಿ,ಹೆಗಡೆ.*

33 views0 comments
bottom of page