top of page

ತೊಟ್ಟು-೬೯

ತೊರೆಯಲ್ಲಿ

ಸಿಕ್ಕವನ

ಬದುಕಿಸಲು,

ಉಟ್ಟ ಸೀರೆ

ಬಿಚ್ಚಿ

ಎಸೆದಳು

ಹೃದಯವಂತಳು;

ಬಯಲಲ್ಲೇ

ಬತ್ತಲಾಗಿದ್ದಾಳೆಂದು

ಹಿಡಿದು

ತಂದು

ಬಡಿದು

ಕೊಂದರು

ಮರ್ಯಾದೆವಂತರು!!


ಡಾ. ಬಸವರಾಜ ಸಾದರ

1 view0 comments
bottom of page