top of page

ತೊಟ್ಟು-೨೫೨

ಹೊಣೆ-ಋಣ

-----------------

ಎಷ್ಟೊಂದು

ಹೊಣೆ

ಸಮುದ್ರಕ್ಕೆ!

ಉಪ್ಪುನೀರ

ಸೋಸಿ

ಸಿಹಿನೀರ

ಮಳೆ

ಸುರಿಸುತ್ತದೆ

ಇಳೆಗೆ;

ಋಣಗೇಡಿಯಲ್ಲ

ಇಳೆ,

ಬಿದ್ದ ನೀರ

ಮರಳಿ

ತಲುಪಿಸಿ

ತೃಪ್ತಿ

ಪಡೆಯುತ್ತದೆ

ಕಡಲಿಗೆ.


ಡಾ. ಬಸವರಾಜ ಸಾದರ.

6 views0 comments
bottom of page