top of page

ತೊಟ್ಟು-೨೧೯

ವ್ಯತ್ಯಾಸ

-------------

ಒಂದು ಮಳೆ

ತೊಳೆಯುತ್ತದೆ

ಇಳೆಯ ಕೊಳೆ,

ನೀಡುತ್ತದೆ

ತಂಪಿನಲೆ,

ಬೆಳೆಯುತ್ತದೆ

ಅನ್ನದ ಬೆಳೆ;

ತರುತ್ತದೆ

ಸುಖ-ಸಮೃದ್ಧಿಯ

ಕಳೆ!

ತಿಳಿಯಲಾರನೆ

ಮಾನವ?

ನಿತ್ಯ ಹರಿಸುತ್ತಲೇ

ಇದ್ದಾನೆ

ಅಸಹನೆ

ಅಸಮಾದಾನಗಳ

ಉರಿಬೆಂಕಿಯ

ಹೊಳೆ!!


ಡಾ. ಬಸವರಾಜ ಸಾದರ

5 views0 comments
bottom of page