top of page

ದಾಹ

ಬೆತ್ತಲಾದ ಮರಕೆ ಬದುಕು ಕಟ್ಟುವ ಧ್ಯಾನ

ನಗುತ್ತವೆ ಒಮ್ಮೊಮ್ಮೆ

ಚಿಗುರೆಲೆಯ ತಾರುಣ್ಯ

ಹಂಗಿಸುವ ಯೌವನದ ಮುಂದೆ

ಮುದಿತನದ ಲವಲವಿಕೆ

ಬಾಗುವುದಿಲ್ಲ ಶಿರವ

ಲಜ್ಜೆಗೆಟ್ಟ ಬಿರುಗಾಳಿ ಬೀಸದೆ

ಆರುವುದಿಲ್ಲ ದಾರಿದೀಪ

ಮಾಗಿದ ದೇಹ

ಗೋಚರಿಸಿದರೂ

ಹೊರಗೆ ಬಸವಳಿದು ಮುಪ್ಪಿನಂತೆ

ತನ್ನ ಒಡಲೊಳಗೆ ಮಡಿಲ ಹಾಸುವುದು

ಹಲವು ಜೀವಗಳಿಗೆ

ಜೇನಿನ ಸಿಹಿಗಳಿಗೆ

ಬಹಿರಂಗದ ಬರಡುತನ

ಅಂತರಂಗದ ಚಿಗುರುಗಳಿಗೆ

ಖಾಲಿ ಜೋಳಿಗೆಯಾಗುವುದೇ ಇಲ್ಲ

ಮಾಗುವಿಕೆಗೆ ವೃದ್ಧಾಪ್ಯವೆಂಬ

ಹಣೆಪಟ್ಟಿ ಕಟ್ಟ ಬೇಕಿಲ್ಲ

ಕಟ್ಟಬೇಕಾಗಿರುವುದು

ಅನುಭವದ ನೆತ್ತಿಯ ಮೇಲೆ

ಬದುಕಬೇಕೆಂಬ ಬತ್ತದ ಹಸಿವಿನ ಬುತ್ತಿ

ಖಾಲಿ ಹಣೆಗೆ ಕುಂಕುಮದಿಂದ

ಸೌಭಾಗ್ಯತನ ಉತ್ಪತ್ತಿ

ಬಾಯಾರಿಕೆಯ ದಾಹಕ್ಕೆ

ಹನಿ ನೀರಿಗೆ ಮುಕ್ತಿ


ಮಂಜುನಾಥ ನಾಯ್ಕ ಯಲ್ವಡಿಕವೂರ

13 views0 comments

Comments


©Alochane.com 

bottom of page