top of page

ಇರುವು

ಇದ್ದು ಬಿಡಬೇಕು

ಮಂಜಿನ ಮಬ್ಬಿನಂತೆ

ಕಂಡರೂ ಕಾಣದಂತೆ

ಒಂದಿಷ್ಟೂ

ಅರ್ಥವಾಗದಂತೆ

ಇದ್ದೇವೋ ಇಲ್ಲವೋ

ಎಂದು ತಡಕಾಡುವಂತೆ

ಒಂದಿಷ್ಟು ಹೊತ್ತಿನ

ಹುಡುಕಾಟದಂತೆ

ಹೇಗಿದ್ದರೂ

ಪ್ರಕಟವಾಗುತ್ತೇವೆ

ಬದುಕ ವಾಸ್ತವದ

ರವಿ ಕಿರಣಗಳು

ಪ್ರಖರಗೊಂಡಂತೆ

ಅಲ್ಲಿಯವರೆಗಾದರೂ

ಮಬ್ಬಿನ ಮಾಯೆ

ಮುಸುಕಿರಲಿ

ಕನಸಿನ ಇಬ್ಬನಿಯ

ತಬ್ಬಿದ ಅನುಭೂತಿಯಿರಲಿ

ಶಾಂತಲಾ ರಾಜಗೋಪಾಲ್

ಬೆಂಗಳೂರು


Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Commentaires


©Alochane.com 

bottom of page