ಅರ್ಥshreepadnsSep 12, 20231 min readಆಲೋಚನೆ, ಕ್ರಿಯೆ ಎತ್ತರದ್ದಾಗಿರಲಿ,ಗಂಟಲು ಹರಿವ ದನಿಯಲ್ಲ;ಗುಡುಗು ಸಿಡಿಲುಗಳಿಗೇನರ್ಥ,ಮಳೆಯಾದಾಗಲೆ ಚೈತನ್ಯ, ಜಗಕ್ಕೆಲ್ಲ.ಡಾ. ಬಸವರಾಜ ಸಾದರ. --- + ---
ದೀಪಾವಸಾನಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---
ವ್ಯವಸ್ಥೆಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---
Comentários