top of page

ಹೊಸತನ

ಉದಯ ಸೂರ್ಯ ಕಿರಣ ತಂತು

ಇಳೆಗೆ ಹೊಸತನ

ಜಡ ಕಳೆದು ಬುವಿಯ ಮಡಿಲು

ತಳೆಯಿತು ನವಚೈತನ್ಯ


ಹೂವು ಅರಳಿ ಗಂಧ ಹರಡಿ

ಎಲ್ಲೆಲ್ಲೂ ಘಮಘಮ

ಅವನಿಗೊಲವ ತೋರಲು

ದಿನಕರನ ಸರಿಗಮ


ರವಿಯ ಹೊಂಬಿಸಿಲು ಸೋಕಿ

ನಲಿವು ದಿನದಿನ

ಸುರಿವ ಕಿರಣ ಧಾರೆಯಲ್ಲಿ

ಮಿಂದು ಧರಣಿ ಪಾವನ


ಏನು ಮಾಯೆ ರವಿಯ ಲೀಲೆ

ವನ ವನವೂ ನಂದನ

ಯುಗ ಯುಗವು ಕಳೆದರೂ

ದಿನವು ನಿತ್ಯ ನೂತನ



ವೆಂಕಟೇಶ ಬೈಲೂರು

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page