ಹೊಸತನ
- ಆಲೋಚನೆ
- Mar 6, 2022
- 1 min read
ಉದಯ ಸೂರ್ಯ ಕಿರಣ ತಂತು
ಇಳೆಗೆ ಹೊಸತನ
ಜಡ ಕಳೆದು ಬುವಿಯ ಮಡಿಲು
ತಳೆಯಿತು ನವಚೈತನ್ಯ
ಹೂವು ಅರಳಿ ಗಂಧ ಹರಡಿ
ಎಲ್ಲೆಲ್ಲೂ ಘಮಘಮ
ಅವನಿಗೊಲವ ತೋರಲು
ದಿನಕರನ ಸರಿಗಮ
ರವಿಯ ಹೊಂಬಿಸಿಲು ಸೋಕಿ
ನಲಿವು ದಿನದಿನ
ಸುರಿವ ಕಿರಣ ಧಾರೆಯಲ್ಲಿ
ಮಿಂದು ಧರಣಿ ಪಾವನ
ಏನು ಮಾಯೆ ರವಿಯ ಲೀಲೆ
ವನ ವನವೂ ನಂದನ
ಯುಗ ಯುಗವು ಕಳೆದರೂ
ದಿನವು ನಿತ್ಯ ನೂತನ
ವೆಂಕಟೇಶ ಬೈಲೂರು
Comments