
ಹುಡುಕುತ್ತಲೇ ಇರೋಣ
*********************
ಬಂತು ಬಂತು ಬಂತು ೫ಜಿ
ಎಲ್ಲಿ ನಮ್ಮ ಗುರೂಜಿ?
ಕಳೆದುಹೋಗಿದ್ದಾನೆ ಅಬ್ಬರದಲ್ಲಿ
ಸಿಗಲಾರನು ಅವನಿನ್ನು ಸುಲಭದಲ್ಲಿ
*************ಹುವೆಂ**********
ಸ್ವಲ್ಪ ಯೋಚಿಸಿ
**************
ಬರಿ ಬೆನ್ನುಹತ್ತಿದರೆ ೫ ಜಿ
ಸಿಗುತ್ತದೇನು ಗಂಜಿ?
ಗಂಜಿಗೆ ರೈತನೇ ಬೇಕು
ಅವನಿಗಿಷ್ಟು ಮರ್ಯಾದೆ ಕೊಡಲೇಬೇಕು
*************ಹುವೆಂ********
ಸಾವಧಾನ
**********
ಶಾಸಕರಾಗಿ ಗೆದ್ದು ಬಂದ ಎಲ್ಲರಿಗೂ
ಸಿಗುವುದಿಲ್ಲ ಮಂತ್ರಿಸ್ಥಾನ
ಕನ್ನಡ ಸಾಹಿತಿಗಳೆಲ್ಲರಿಗೂ ಅಸಾಧ್ಯ
ರಾಜ್ಯೋತ್ಸವದ ಮಾನ-ಸನ್ಮಾನ
****************ಹುವೆಂ*******
ಎತ್ತು ಮರಿ ಕಸವ
****************
ಬೇಕು ಮರಿ ನಿನ್ನಂಥವರು
ಕಸವನೆತ್ತಿ ಹಾಕುವವರು
ನಿನಗಿಂತಲೂ ಉದ್ದ ಕಸಬರಿಗೆ
ಪಳಗಿಸದನು ನಿನ್ನ ನಿಲುವಿಗೆ
**************ಹುವೆಂ*********
ನಾವಿರುವುದೇ ನಿಮಗಾಗಿ
***********************
ನಿಮ್ಮ ಅಮೂಲ್ಯ ಮತ ಕೊಟ್ಟು ಆರಿಸಿ ತನ್ನಿರಿ
ಸೇವೆ ಮಾಡಲು ಟೊಂಕ ಕಟ್ಟುವೆವು
ಗದ್ದುಗೆ ಸಿಕ್ಕಿದ ಮೇಲೆ ಮುಗಿಯಿತು
ಐದು ವರ್ಷ ಆರಾಮವಾಗಿಯೇ ಇರುವೆವು
**************ಹುವೆಂ********
ಡೊಂಬರಾಟ
************
ವೋಟಿನ ಆಸರೆ ಪಡೆದುಕೊಂಡು
ಚುನಾವಣಾ ಬೇಲಿಯ ದಾಟುವರು
ಗತ್ತು ಗೊತ್ತಿಲ್ಲದ ಮಂದಿ
ಜೋಲಿ ಹೊಡೆದು ಲಾಗ ಹಾಕುವರು!
*************ಹುವೆಂ*********
(೧೯೮೨ ರಲ್ಲಿ ಪ್ರಕಟವಾದ "ನೆರಳು"ಎಂಬ ನನ್ನ ಚೌಪದಿ ಸಂಕಲನದೊಳಗಿನವು--ಚೌಪದಿಗಳು)
ಪ್ರೊ.ವೆಂಕಟೇಶ ಹುಣಶಿಕಟ್ಟಿ