top of page

ಹರಿಯುವಂತೆ ಧೂಪ

ಹರಿಯುವಂತೆ ಧೂಪ

ಉರಿಯುವಂತೆ ದೀಪ

ಸರಿದುವೆಷ್ಟೊ ಹಿರಿಯ ಜೀವ

ನಿಲಿಸಿ ಮಧುರ ನೆನಪ


ಜನಿಸಿದಂದಿನಿಂದ ನದಿ

ಉಣಿಸಾದರು ಕಡಲಿಗೆ

ಕಡಿಯದೆ ಇದೆ ಅದರ ಧಾರೆ

ಕಡೆಯೆಲ್ಲಿದೆ ಬದುಕಿಗೆ?


ಅಳಿಸಿದೆ ನಿಜ ಕಾಲ

ಬೆಳೆಸಿದೆ ಬಾಳೆಲ್ಲವ,

ಆದರೇನು ತಡೆಯಬಹುದೆ

ಬಾಳಿನ ಚಿರಚಲನವ?


ಸಾಗುವವರೆ ಎಲ್ಲರು

ಸಾಗಿದಂತೆ ಹಿರಿಯರು,

ಮಾಗಿ ಬಂದರೇನು ಮತ್ತೆ

ಚಿಗುರು ನಕ್ಕೆ ನಗುವುದು.


ಡಾ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

コメント


©Alochane.com 

bottom of page