top of page

ಸಿಕ್ಕೀತೇ ಹರುಷ....!

Updated: Aug 14, 2020


ಹೊಸ್ತಿನಲಿ ಕುಳಿತು

ಬಾಳ ಪುಟಗಳನು

ಒಮ್ಮೆ ತಿರುಗಿಸಿ ನೋಡಿ

ಎಲ್ಲಿ ಸಿಕ್ಕಿದೆ

ಹರುಷ ಎಲ್ಲರಿಗೂ

ಬುದ್ಧ ಹುಡುಕಲಿಲ್ಲವೇ

ದಟ್ಟ ಕಾನನ ಹೊಕ್ಕು

ಸಾಧು ಸಂತರು ಅರಸಲಿಲ್ಲವೇ

ಮಂಜು ಮುಸುಕಿದ

ಶುಭ್ರ ಹಿಮಾಲಯದಲ್ಲಿ ಸಿಕ್ಕು !

ಕಾಣ ಬಯಸಲಿಲ್ಲವೇ

ಕದಳೀ ವನದಲ್ಲಿ

ವಿಷದ ಬಟ್ಟಲಲ್ಲಿ

ಇದೆಯಾ ಎಂದು ನೋಡಲಿಲ್ಲವೇ.....?


ಹೌದು,

ಹರುಷವೊಂದು ಮರೀಚಿಕೆಯಂತೆ

ಬೆನ್ನು ಹತ್ತುವವರೇ

ನಾವೆಲ್ಲಾ ಓಡಿದಷ್ಟು ಮುಂದೆ

ಹಿಡಿಯಲು ಹಿಂದೆ

ಕಾಣದಿರುವುದನ್ನು ಕೈಚಾಚಿ

ಇರುವುದೆಲ್ಲವ ಬಿಟ್ಟು

ನಮ್ಮ ತನ ಸುಟ್ಟು

ಆರಸುತ್ತಿಲ್ಲವೇ ಸಾಯುವ ತನಕ

ಒಮ್ಮೆಯಾದರೂ ನೆನೆಯಬಾರದೇ

ಆ ಭಗವಂತನಲ್ಲಿ ಮನವಿಟ್ಟು

ಈ ಬಂಧನವ ಬಿಟ್ಟು ......!


- ಪ್ರಭಾಕರ ತಾಮ್ರಗೌರಿ

ಉತ್ಸಾಹ ಮತ್ತು ಸೃಜನಶೀಲತೆಯನ್ನು ಕಾಪಿಟ್ಟುಕೊಂಡು ಬಂದಿರುವ ಪ್ರಭಾಕರ ತಾಮ್ರಗೌರಿ ಅವರು ಶ್ರೀಕ್ಷೇತ್ರ ಗೋಕರ್ಣದ ಪಾರ್ವತಿ ದೇವಸ್ಥಾನದ ಆವರಣದಲ್ಲಿ ನೆಲೆಸಿರುವ ಕವಿ,ಕತೆಗಾರ,ಕಾದಂಬರಿಕಾರ ಹಾಗು ಸ್ನೇಹ ಜೀವಿ.ಬಿ.ಕಾಂ.ಪದವೀಧರರಾಗಿರುವ ಇವರಿಗೆ ಪುಸ್ತಕ ಪ್ರಾಧಿಕಾರದ ಬಹುಮಾನಸಂಚಯ ಕಥಾ ಸ್ಪರ್ಧೆಯ ಬಹುಮಾನ,ಬೆಂಗಳೂರು ಟಿ.ಎಂ.ಪಿ.ಕೇಂದ್ರದ ಟಿಎಂ.ಪಿ.ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ಕಥಾ ಸ್ಪರ್ಧೆ ಬಹುಮಾನ,ಮಾಸ್ತಿ ಕಥಾ ಸ್ಪರ್ಧೆ ಬಹುಮಾನಗಳು ದೊರೆತಿವೆ.

ಕನಸು ಕರೆಯುತಿದೆ,ಕಾರ್ತಿಕದ ಬೆಳಕು ಅವರ ಕವನ ಸಂಕಲನಗಳು.

ಮತ್ತೆ ಬಂದ ವಸಂತ,ಅನುರಾಗ ಬಂಧನ,ಕರಗಿದ ಕಾರ್ಮೋಡ, ಅವರ ಕಾದಂಬರಿಗಳು. ಬದಲಾದ ದಿಕ್ಕುಗಳು, ಬಾಳ ಸಂಜೆಯ ನೆರಳು, ಮುಸ್ಸಂಜೆಯ ಹೊಂಬಿಸಿಲು ಮತ್ತು ಇತರ ಕಥೆಗಳು ,ಔದಾರ್ಯದ ನೆರಳಲ್ಲಿ ಪ್ರಭಾಕರ ಅವರ ಕಥಾ ಸಂಕಲನಗಳು.ಪ್ರಚಾರದಿಂದ ದೂರ ಉಳಿದಿರುವ ಸಜ್ಜನ ಪ್ರಭಾಕರ ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.






Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page