top of page

ಶ್ರಾವಣ ಸಂಭ್ರಮ

ಬಂತು ಬಂತು ಶ್ರಾವಣ

ತಂತು ನಲಿವಿನ ತೋರಣ

ದಿನ ದಿನವೂ ಸಂಭ್ರಮ

ಜೀವ ಭಾವದ ಸಂಗಮ


ಬೀಸಿ ಬರುವ ಗಾಳಿಗೂ

ಹೂವ ಕಂಪ ಘಮ ಘಮ

ತೂರಿ ಬರುವ ಕಿರಣಕೂ

ಮಂದಸ್ಮಿತ ಅನುಪಮ


ಸಾಲು ಮರದ ಅಲೆಯಲೂ

ಹಸಿರು ವರ್ಣದೋಕುಳಿ

ಮತ್ತೆ ಕತ್ತನೆತ್ತಲು

ಮೊಲ್ಲೆ ಮೊಗ್ಗಿನೋಕುಳಿ


ಮಧುವನರಸುವ ದುಂಬಿಗೆ

ಪುಷ್ಪಹಾಸ ಚುಂಬನ

ಜೇನ ಸವಿದ ಮತ್ತಿಗೆ

ಕಾತರಿಕೆಯ ಮಿಲನ


ಸೋನೆ ಮಳೆಯ ಸೆರಗಿಗೆ

ಭುವಿಯು ಬೆರಗುಗೊಂಡಿದೆ

ಶ್ರಾವಣದ ಯಾತ್ರೆಗೆ

ಮುತ್ತೈದೆ ಜಾತ್ರೆ ನೆರೆದಿದೆ


-ಜಯಶ್ರೀ ರಾಜು, ಬೆಂಗಳೂರು


ಶ್ರೀಮತಿ ಜಯಶ್ರೀ ರಾಜು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರು. ಪ್ರಸ್ತುತ ಬೆಂಗಳೂರು ನಿವಾಸಿತಾಗಿರುವ ಇವರು ಉಭಯ ಭಾಷಾ ಸಾಹಿತಿ. ಕೊಂಕಣಿ ಮತ್ತು ಕನ್ನಡ ಭಾಷೆಯಲ್ಲಿ ಕತೆ, ಕವನ, ಲೇಖನಗಳನ್ನು ಬರೆಯತ್ತಾರೆ. ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಸಾಹಿತಿಯಾಗಿ, ನೃತ್ಯ, ಸಂಗೀತವನ್ನು ಹವ್ಯಾಸವನ್ನಾಗಿಸಿಕೊಂಡವರು. ಉತ್ತಮ ನಿರೂಪಕಿಯೂ ಕೂಡ. ಆಕಾಶವಾಣಿಯಲ್ಲಿ ಉಪನ್ಯಾಸ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಇವರ ಒಂದು ಕವನ ಈಗ ನಿಮ್ಮೆಲ್ಲರ ಓದಿಗಾಗಿ.....


 
 
 

1 comentario


Navya Dinakar
Navya Dinakar
06 ago 2020

ಬಹಳ ಸೊಗಸಾಗಿದೆ 👍👍👍

Me gusta

©Alochane.com 

bottom of page