top of page

ವೃದ್ಧಾಶ್ರಮದ ಹಣತೆಗಳು

ಬೆಳಕು ನೀಡಿ

ಖಾಲಿಯಾದ ಹಣತೆಗಳು

ವೃದ್ಧಾಶ್ರಮ ಸೇರಿವೆ


ಅಂಚು ಕಿತ್ತು ಹೋದ

ಹಣತೆಯೊಳಗೆ

ಮಕ್ಕಳಿಗಾಗಿ ಗೇಯ್ದ

ಬೆವರಿನ ಪಸೆಯಿದೆ


ಸುಟ್ಟುಹೋದ ಬತ್ತಿಯೊಳಗೆ

ಕುಡಿಗಳಿಗೆ ಬೆಳಕು ನೀಡಿ

ದಹಿಸಿಕೊಂಡ ಕನಸುಗಳ

ಕನವರಿಕೆಯಿದೆ


ಆವಿಯಾದ ಎಣ್ಣೆಯೊಂದಿಗೆ

ಕರುಳಿನ ಸಂಬಂಧಗಳೂ

ಮರೆಯಾದ

ನೋವಿದೆ


ಈಗ ಯಾರದೋ ಬತ್ತಿ

ಯಾರೋ ಹಾಕಿದ ಎಣ್ಣೆಗೆ

ಉರಿವ

ಬೆಳಕಿನ ಕಣ್ಣೊಳಗೆ

ಕಾಂತಿಯಿಲ್ಲ


ವೃದ್ಧಾಶ್ರಮದ ಹಣತೆಗಳಿಗೆ

ದೀಪಾವಳಿಯಿಲ್ಲ.


- ಶ್ರೀಧರ್ ಶೇಟ್ ಶಿರಾಲಿ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page