top of page

ಯುಗಾದಿ


ಚೈತ್ರಮಾಸದಿ

ಯುಗದ ಆರಂಭ

ಸೃಷ್ಟಿಯ ಪ್ರಾರಂಭ

ಕಾಲಕ್ಕೂ-ನಮಗೂ

ನೇರ-ನಂಟು

ಇದುವೇ ಬ್ರಹ್ಮಗಂಟು.

ಪಚ್ಚೆ ಹಸಿರ ತುಂಬಿ

ನಳನಳಿಸುವ

ಗಿಡ-ಮರ-ಬಳ್ಳಿ

ಬೋಳಾಗಿ

ಈ ನವಮಾಸದಲಿ

ಎಲೆ ಚಿಗುರಿ

ರೆಂಬೆ-ಕೊಂಬೆಯೆಲೆಲ್ಲಾ

ಹೂ-ಕೊನರಿ,

ಕಾಯಾಗಿ

ಕಾಯಿ-ಹಣ್ಣಾಗಿ

ಹಣ್ಣು-ಮಣ್ಣಳೊಂದಾಗಿ

ಮಣ್ಣಾಯಿತು ಜೀವರಸ.

ಮತ್ತದೇ ನಿಸರ್ಗಚಕ್ರ

ನಿತ್ಯನಿಯಮದ ಸೊಬಗಿನಾಟ.

ಸೃಷ್ಟಿ-ಲಯ

ಹಗಲು-ಇರುಳು

ಕತ್ತಲು-ಬೇಳಕು

ಹುಟ್ಟು-ಸಾವಿನಂತೆ

ಜೀವನ ಚಕ್ರವೂ

ಸುಖ-ದುಃಖ

ನೋವು-ನಲಿವುಗಳ

ಆಗರ,ನಿರಂತರ.

ಈ ಗಹನ ಸತ್ಯ

ಮನದಟ್ಟಾದಾಗಲೇ

ಬದುಕು ನಿತ್ಯ ವಸಂತ.

ಒಣಗಿದ ಮರದಲಿ

ಚಿಗುರು ಮೊನಸುವಂತೆ

ಬೇಸರ ಮನದಲಿ

ನೆಮ್ಮದಿ ಹೊರಹೊಮ್ಮಲಿ

ಜೀವನ ಹಬ್ಬವಾದರೇ

ಸಂತಸ ಚಿಲುಮೆಯಾಗಲಿ

ಬೇವು-ಬೆಲ್ಲದಂತೆ

ಸಮರಸದಿ ಸಾಗಲಿ

ಎಂದಿದೆ ಈ ನವ ಯುಗಾದಿ!!


*ಸೋಮನಾಥ.ಡಿ.*



ನಮ್ಮ ಬಳಗದ ಕವಿ ಚಿಂತಕ ಪ್ರಾಂಶುಪಾಲ ಸೋಮನಾಥ ಡಿ.ಅವರು ಯುಗಾದಿ ಕುರಿತು ಬರೆದ ನಿತ್ಯ ಸತ್ಯದ ಕವಿತೆಯನ್ನು ಇಂದು ಪ್ರಕಟಿಸುವ ಖುಷಿ ನನ್ನದು. ಸೋಮನಾಥ ಡಿ.ಅವರು ನಿತ್ಯ ಸತ್ಯವನ್ನು ತಮ್ಮ ಬರವಣಿಗೆಯಲ್ಲಿ ಪ್ರತಿಪಾದಿಸುತ್ತಿರಲಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ



20 views1 comment

1 commentaire


gauthamishree
gauthamishree
23 avr. 2024

👌🙏🙏

J'aime

©Alochane.com 

bottom of page