top of page

ಮಂತ್ರವಾಗಲಿ ಮಾತು

ಸಮುದ್ರದ ದಂಡೆಗೆ ಹೋಗಿ ನಿಂತೆ

ಮಾತು ಹೊರಡಲಿಲ್ಲ

ತುಂಬಿ ಹರಿವ ನದೀದಂಡೆಗೆ ಹೋಗಿ ನಿಂತೆ

ಮಾತಾಡಬೇಕೆಂದು ಅನಿಸಲಿಲ್ಲ

ಪರ್ವತದ ಬುಡದಲ್ಲಿ ನಿಂತೆ

ಬಾಯಿ ಕಟ್ಟಿತು ಮಾತು

ಆಕಾಶದತ್ತ ನೋಡುತ್ತ ನಿಂತೆ

ಮೂಕವಾಯಿತು ಮಾತು


ಅರ್ಥವೇ ಅರ್ಥ ಕಳೆದುಕೊಳ್ಳುವ ಇಲ್ಲಿ

ಮಾತಾಡುವುದು ಹೇಗೆ?

ಮಾತು ಕೇವಲ ಶಬ್ದ

ತುಂಬಿದಂತೆ ಅರ್ಥ

ತುಂಬುತ್ತ ತುಂಬುತ್ತ ಮಂತ್ರವಾಗಬೇಕು

ಸಮುದ್ರ ನದಿ ಪರ್ವತ

ಆಕಾಶ ಅವಕಾಶಗಳೆಲ್ಲ ತುಂಬಿ

ಧ್ಯಾನವಾಗಬೇಕು.


-ಡಾ. ವಸಂತಕುಮಾರ ಪೆರ್ಲ.

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

留言


©Alochane.com 

bottom of page