top of page

ಮಾಗಿಯ ಚಳಿಯಲ್ಲಿ

ಹಗಲೆಲ್ಲಾ ದಹಿದಹಿಸುವ ಬಿಸಿಲಿನ ಬೇಗೆ ರಾತ್ರಿ ಕರುಳು ಕತ್ತರಿಸುವ ಚಳಿಯ ಅಲಗು ಹೊರಗಿರುವ ಶೀತಲ ಮಾರುತದ ಮೇಲೆ ನರ್ತಿಸುವ ಇಬ್ಬನಿ ಸೋನೆ ಹಣ್ಣಾಗಿ ಹನಿಯಂತುದುರುವ ಹಸಿರು ಕೊಂಬೆ ಕೊಂಬೆಗಳ ನಡುವೆ ಸಿಕ್ಕಿಕೊಂಡ ಉಸಿರು ಮಡುಗಟ್ಟಿ ನೀರು ಘನವಾಗಿ ಬೀಳುವ ಹನಿಹನಿ ಹಿಮ ಒಳಗರಳುವ ದಳವೂ ಮುದುರಿ ಮೊಗ್ಗಾಗಿ ಎದ್ದ ಗೋಡೆಗಳೂ ಬಿದ್ದು ಬಯಲಾಗಿ ಹಾಸಿದ ಹಾಸಿಗೆಯೂ ಚುಚ್ಚುವ ಮುಉಳ್ಳಾಗಿ ಹೊದ್ದ ಹೊದಿಕೆಯೂ ತಣ್ಣನೆಯ ರಾಶಿಯಾಗಿ ಈ ಮಾಗಿಯ ಚಳಿಯಲ್ಲಿ ಸಿಕ್ಕಿಕೊಂಡವರಿಗೆ ಉಸಿರಾಡಲು ಬೆಚ್ಚನೆಯ ತಾಣವೆಲ್ಲಿ...? ರಕ್ಷಣೆ ಎಲ್ಲಿ...? ಅದೇ ಪ್ರಿಯತಮೆಯ ಒಡಲು ಮಧುರ ಮಡಿಲು ಬಿಸಿ ನೆತ್ತರ ಕಡಲು ! ಅಲೆಗಳೆದ್ದ ಮಧುರಾಧರಗಳಲ್ಲಿಳಿದು ಕಾದ ಮೈ ಕಾವಲಿಯ ಮೇಲುರುಳಿ ಕಣಿವೆ ಕುಲುಮೆಯಲರಳಿ ಕಾದು ಕಡು ಕೆಂಪಾಗಿ ಹೊರಳಿ ಕುಡಿಯೊಡೆದು ಸೊಂಪಾಗಿ ತೆವಳಿ ಹದವಾದ ನೆಲದಲ್ಲಿ ಹಚ್ಚನೆಯ ಹಸಿರಾಗಿ ಚಿಮ್ಮಿ ಹೊಮ್ಮುವೆ ಮಾಗಿಯ ಚಳಿಗೆ...!


-ಪ್ರಭಾಕರ ತಾಮ್ರಗೌರಿ , ಗೋಕರ್ಣ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page