top of page

ಭಸ್ಮಾಸುರ

ನಾವು ಒಂದು ಭಸ್ಮಾಸುರನನ್ನು ಸೃಷ್ಟಿ ಮಾಡಿದ್ದೇವೆ

ನಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತಿದೆ

ಮರೆಯಾಗಲು ಜಾಗವಿಲ್ಲ


ಹಗಲಿರುಳು ಓಡುತ್ತಿದ್ದೇವೆ

ಮಕ್ಕಳನ್ನು ಬಗಲಿಗವಚಿ

ಕೈಲಾಗದವರು ಬಿದ್ದಿದ್ದಾರೆ

ಅಳಿದುಳಿದವರು


ಮನೆಮಠ ತೊರೆದಿದ್ದೇವೆ

ಗುಂಪುಗುಂಪಾಗಿ ಗುಳೆ ಎದ್ದಂತೆ

ಕಾಡು ನಾಶವಾಗಿದೆ

ಎಲ್ಲಿ ಅಡಗುವುದು ಗೊತ್ತಿಲ್ಲ


ಸಂಬಂಧಗಳು ನಾಶವಾಗಿ

ನಮಗೆ ನಾವೇ ಮುಖ್ಯವಾಗಿ

ವ್ಯವಧಾನವೇ ಇಲ್ಲದಂತೆ

ಇದೇ ಕೊನೆಯ ಓಟ ಎಂಬಂತೆ

ಜೀವ ಉಳಿಸಿಕೊಳ್ಳಲು

ಬೇಡಿ ತಿನ್ನಲು


ಭಸ್ಮಾಸುರ ಬೆನ್ನು ಹತ್ತಿದ್ದಾನೆ

ಕೈಯ ಎತ್ತಿದ್ದಾನೆ


ಎಲ್ಲಿಗೆ ಓಡುವುದು

ಉರುಟಾಗಿದೆ ಭೂಮಿ


ನಮ್ಮ ಎದೆಗೇ ಬಂದಿದ್ದಾನೆ

ಬಿಸಿಲ ಧಗೆ ಬೇಗೆ

ಓಡುವುದು ಎಲ್ಲಿಗೆ

ಈ ಬಟಾಬಯಲಿನಲ್ಲಿ


ಇನ್ನೀಗ ನಮ್ಮ ತಲೆಯ ಮೇಲೆ

ನಮ್ಮದೇ ಕೈ.


-ಡಾ. ವಸಂತಕುಮಾರ ಪೆರ್ಲ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page