ಮಲೆನಾಡ ಮಡಿಲಲಿ
ಏಕಾಂಗಿಯಾಗಿರಲು
ನೀ ಇರದ ಕೊರಗೊಂದು
ಕಾಡುತ್ತಿತ್ತು
ಸೌಂದರ್ಯ ಜಗದಲ್ಲಿ
ನಾ ಇದ್ದೆ ಅಂದರೂ
ನೀ ಇಲ್ಲದ ಮಂಕು
ಕಾಣುತ್ತಿತ್ತು
ಎಷ್ಟೊ ಕಾದವು ಮನವು
ದಾರಿ ಕಳೆದಂತೆಲ್ಲ
ಕಾಣದೇ ಹೋದಾಗ ನೋವು
ಎದೆಯ ತುಂಬಾ
ಆಸೆ ಹೊತ್ತಮನವು
ಭಾರವಾಯಿತು ಮನವು
ನೀನಿಲ್ಲ ಎಂಬ
ಅರಿವು ಬಂದು
ಈ ಮಡಿಲು ನಿನಗಾಗಿ
ಇಲ್ಲೊಮ್ಮೆ ಕಾಯುತಿದೆ
ಎಂತ ಒತ್ತಡವಿರಲಿ
ಬಂದು ಬಿಡು ನಲ್ಲೆ
...ಉಮೇಶ ಮುಂಡಳ್ಳಿ ಭಟ್ಕಳ
Comments