top of page

ಬೇಗುದಿ

ಯಾವ ಜನ್ಮದ ಪ್ರೀತಿ

ನನ್ನೆದೆಗೆ

ಬಂದೊದೆಯಿತು

ಕಾಡಿತು

ಬೇಡಿತು

ನನ್ನೊಲವ


ಏನು ಬೇಡಲಿ

ನಾನು

ಅಸಹಾಯಕ

ಕೊಡಲುಂಟೆ

ನನ್ನಲ್ಲಿ

ಭಾವಬಂಧ


ಒಡಲು ಬರಿದಾದಂತೆ

ತಳಮಳ

ಹೇಳಲಾರಿಗೆ

ಒರೆಗೆ ಹಚ್ಚಲುಂಟೆ ?


ಕ್ಷಮಿಸು

ನನ್ನೊಲವೆ

ದೂರ ಮಾಡಲಾರೆ

ನಿನ್ನನು

ಕುದಿಯುತ್ತೇನೆ

ಒಳಗೊಳಗೇ

ಬೇಯುತ್ತೇನೆ

******

ಪ್ರೊ.ವೆಂಕಟೇಶ ಹುಣಶೀಕಟ್ಟಿ

11 views0 comments

Comments


©Alochane.com 

bottom of page