top of page

ಬಡವರ ಬಂಧು

ಮಕ್ಕಳ ಕವಿತೆ


ಬೇಸಿಗೆಯಲ್ಲಿ ಬೇಕೇಬೇಕು

ತಂಪು ಪಾನೀಯ

ಐಸ್ ಕ್ರೀಮ್,ಸರಬತ್ತು ಇಲ್ಲದಿದ್ದರೆ

ಸೆಕೆ ಎಷ್ಟೊಂದು ಅಸಹನೀಯ

ಸಕ್ಕರೆ ಬೇಕು,ಲಿಂಬು ಬೇಕು

ರೆಫ್ರಿಜರೇಟರ್ ಇರಲಿ ತಂಪಿಗಾಗಿ

ಹಣ ಬಲ ಇದ್ದವರಿಗಿರಲಿ ಇದೆಲ್ಲ

ಬೇರೇನಾದರೂ ಬೇಕಲ್ಲ ಬಡವರಿಗಾಗಿ

ಮಣ್ಣಿನ ಗಡಿಗೆಯಲಿಟ್ಟ ನೀರು

ಎಷ್ಟೊಂದು ತಂಪು ನೋಡಿರಿ

ಕರೆಂಟ್ ಗಾಗಿ ಕಾಯಬೇಕಿಲ್ಲ

ಐಸ್ ಇಲ್ಲದೆ ನೀರು ಕುಡಿಯಿರಿ

ಮಜ್ಜಿಗೆ ತುಂಬಿದ ಗಡಿಗೆಯೊಂದಿದ್ದರೆ

ಸರಬತ್ತು ಯಾವುದು ಬೇಕಿಲ್ಲ

ಒಂದೆರಡು ಲೋಟ ಮಜ್ಜಿಗೆ ಕುಡಿದರೆ

ಬಾಯಾರಿಕೆ ಮತ್ತೆ ಆಗುವುದಿಲ್ಲ

ಸಕ್ಕರೆ,ಲಿಂಬು ಬೇಕಾಗಿಲ್ಲ

ಬಣ್ಣ ಗಿಣ್ಣ ಯಾತಕೆ ಬೇಕು

ಅತಿಥಿಗಳು ಆಗಮಿಸಿದರೆ ಮನೆಗೆ

ಮಜ್ಜಿಗೆಯೊಂದಿದ್ದರೆ ಸಾಕು


ವೆಂಕಟೇಶ ಹುಣಶಿಕಟ್ಟಿ

 
 
 

Recent Posts

See All
ದೀಪಾವಸಾನ

ಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---

 
 
 
ವ್ಯವಸ್ಥೆ

ಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---

 
 
 

留言


©Alochane.com 

bottom of page