top of page

ದಿವವಾಗುವುದು

ತುಂಬ ವಿವಾದಗಳಿವೆ

ವಾಗ್ವಾದಗಳಿವೆ

ಹರಿಯುತ್ತಿದೆ ಚಿಂತನೆಗಳ ಮಹಾಪೂರ

ಚಿತ್ತವ ಭಂಗಗೊಳಿಸುವ ಈ ಒಳಹರಿವುಗಳ ನಡುವೆ

ಇರುವುದು ಹೇಗೆ ನಾನು ನಾನಾಗಿಯೇ.


ಹೇಗೆ ಹರಿತಗೊಳ್ಳುವುದು

ಹೇಗೆ ನನ್ನ ನೆಲೆಯಲ್ಲಿ ನಾನು ನಿಲ್ಲುವುದು

ಮತ್ತು ನವೋನವಕ್ಕೆ ಸಾಗುವುದು

ಅರಳಿ ವಿಕಾಸವಾಗುವುದು.


ಇದೆ ಒಂದೇ ಒಂದು ಹಾದಿ

ನಿನ್ನ ಇಂದ್ರಿಯಗಳ ಮುಚ್ಚಿಕೊಳ್ಳುವುದು

ಏಕತ್ರ ಧ್ಯಾನಸ್ಥನಾಗಿ ನೆಲೆಗೊಳ್ಳುವುದು

ಆಲದಂತೆ ವಿಶಾಲವಾಗುವುದು.


ಒಳಗೆ ಬೆಳೆದರೆ ಸಾಕು

ಬೀಜದ ಹಾಗೆ

ಅದಕ್ಕೇ ಗರ್ಭಗುಡಿಯಲ್ಲಿ ಮಂದ ಬೆಳಕು

ಮತ್ತು ನಿಶ್ಶಬ್ದ.


ಆಗ ನೆಲಕ್ಕೂ ನಭಕ್ಕೂ ಸಲ್ಲುವುದು ಸುಲಭ

ಪಾರಿಜಾತದ ಹಾಗೆ ದಿವವಾಗುವುದು ಮುಖ್ಯ.


-ಡಾ. ವಸಂತಕುಮಾರ ಪೆರ್ಲ.

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page