top of page

ದಸರಾ ವೈಭವ.

ನಾಡ ಜನತೆಯ ನೋವ ಮರೆಸುವ

ಮೈಸೂರ ದಸರಾ ಸಡಗರವು.

ಸಕಲರು ಬೆರೆತು ಭಜಿಸಲು ದುರ್ಗೆಯ

ಮನದಲಿ ಭಕ್ತಿಯ ಸಂಭ್ರಮವು.


ನವರಾತ್ರಿ ದಿನದಲ್ಲಿ ನವವಿಧ ರೂಪದಿ

ದರುಶನ ನೀಡುವ ಹೇ ತಾಯೆ.

ದುಷ್ಟ ಶಕ್ತಿಯ ಮರ್ದನ ಮಾಡುತ

ಶಿಷ್ಟರ ಪೊರೆವ ಮಹಾತಾಯೆ.


ಕನ್ನಡ ಸಂಸ್ಕೃತಿ ಸಾಹಿತ್ಯ ಕಲೆಗಳ

ಸಂಗಮ ದಸರಾ ದಿನದಂದು.

ವಿಶ್ವದ ಜನತೆಯ ಮೊಗದಲಿ ಬೆರಗು

ಅದ್ಭುತ ಕಲೆಯ ಸಿರಿಕಂಡು.


ಹೊನ್ನಿನ ಅಂಬಾರಿ ನಡುವೆ ಪವಡಿಸಿದ

ದುರ್ಗೆಯ ನೋಡಲು ನಾವೆಲ್ಲಾ.

ಇಂದ್ರಲೋಕದ ವೈಭವ ಸಿರಿಯು

ಕಣ್ಣಲಿ ಕುಣಿವುದು ದಿನವೆಲ್ಲಾ.


ದಸರಾ ತಂದಿದೆ ಹಬ್ಬದ ಜಾತ್ರೆಯ

ನಲಿವಿನ ಹೂಬನ ಜನತೆಯಲ್ಲಿ.

ಕೊರೊನಾ ಮಾರಿ ವರುಣನ ಅಬ್ಬರ

ಕಸಿದಿದೆ ನೆಮ್ಮದಿ ನಾಡಿನಲಿ.


ಬನ್ನಿ!ಬಂಧುಗಳೇ,ನಾಡ ಪ್ರಜೆಗಳೇ

ಭಕ್ತಿಲಿ ದುರ್ಗೆಯ ಭಜಿಸೋಣ.

ಬಂದಿಹ ಕಷ್ಟವ ಪರಿಹರಿಸೆನ್ನುತ

ಪಾದಕೆ ಶರಣು ಹೋಗೋಣ.


ಸಾತುಗೌಡ ಬಡಗೇರಿ.

ಅಂಕೋಲಾ ಉತ್ತರ ಕನ್ನಡ.

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

2 Comments


gopalbhasi93
Oct 27, 2020

ತುಂಬಾ ಚೆನ್ನಾಗಿದೆ. ಸಕಾಲಿಕ ಕವನ.

Like

Harish Gowda
Harish Gowda
Oct 27, 2020

ದಸರಾ ಗೊಂಬೆಗಳ ಮಧ್ಯದಿ ಅಡಗಿ ಕುಳಿತಿರುವ ಪದಗಳನ್ನ ಹೆಕ್ಕಿ ಜೋಡಿಸಿದ ಸುಂದರ ಕವಿತೆ ಸುಪರ್ ಸರ್ 🌹🌹

Like

©Alochane.com 

bottom of page