top of page

ತೊಟ್ಟು

ತಾಲಿ ತುಂಬ ಬಾನ,

ತಾಳಿ-ತಾಯಂದಿರಿಗೆ

ಗೌರವದ ಸ್ಥಾನ,

ಜೀವ- ಜೀವಿಗಳಿಗೂ

ಹಕ್ಕಿನ ಸನ್ಮಾನ-

ಕೊಡದ ಯಾವ

ಗದ್ದುಗೆಯೂ

ಬಾಳದು ಬಹಳ

ದಿನಮಾನ,

ಅದು, ಸಾದಿಲವಾರು

ಸುಟ್ಟು ಹಾಕಲು

ಒಟ್ಟಿದ ಕುಳುಬಾನ.


ಡಾ. ಬಸವರಾಜ ಸಾದರ.

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comentários


©Alochane.com 

bottom of page